Tuesday, February 25, 2014

ಅತಂತ್ರ

ಮನಸುಗಳ ಹಿಂದೆ
ದೊಡ್ಡ ಸಂಗ್ರಾಮವೇ ನಡೆದಿದೆ
ಮೇಲೇಳದಂತೆ ಮಾಡಲು
ದೊಡ್ಡ ಹುನ್ನಾರವೇ ನಡೆದಿದೆ||

ಬದುಕಿದರೂ ಸತ್ತಂತಿರಬೇಕು
ತಿವಿದರೂ ನೋವಾಗದಂತಿರಬೇಕು
ಒಳಗೆ ಉರಿ ಹೊತ್ತಿ ಸುಟ್ಟರೂ
ತುಟಿಯಂಚಲಿ ನಗು ಸೂಸಬೇಕು||

ಅವಕಾಶಗಳಿಗೆ ಕತ್ತರಿಹಾಕಿ
ಜೀವನದಲ್ಲೇ ಮೇಲೇಳದಂತೆ
ಪೂರ್ಣವಿರಾಮ ಹಾಕಿದರಾಯಿತು
ನಮ್ಮಪ್ಪನ ಗಂಟೇನು ಹೋಗಬೇಕೆ?||

ಒಂದೋ ಇಲ್ಲೇ ಇದ್ದು
ಸತ್ತಂತಿರಬೇಕು!
ಇಲ್ಲವೋ ಒಳಬೇಗೆ
ತಡೆಯಲಾರದೆ ಕಾಲುಕೀಳಬೇಕು||

ಇದೇ ರಣತಂತ್ರ
ಜೀವನ ಕುತಂತ್ರ
ನಮ್ಮ ಮೇಲಿನವರ ವ್ಯವಹಾರ ತಂತ್ರ
ಅವರೋ ಸ್ವತಂತ್ರ
ನಾವು ಅತಂತ್ರ||

No comments:

Post a Comment

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...