Monday, January 6, 2014

ಬಿಡುಗಡೆ

ಕಾಣದ ಮನದಾಳದ ಮೂಲೆಯಲ್ಲಿ
ಬೀಡುಬಿಟ್ಟಿರುವ ನೋವುಗಳ ಕಂತೆಗಳು;
ವಸಂತಾಗಮನದ ಸಂತಸದಲ್ಲಿ
ನೋವಿನ ಕಂತೆಗಳ ಬಿಡುಗಡೆಯ ಆಲಾಪಗಳು;

ನನ್ನ ಮನಸ್ಸು ಈಗ ನಿರಾಳವಾಗಿದೆ
ನನ್ನನಾಳುವ ಆ ದೇವಗೆ ನೂರು ನಮಸ್ಕಾರ;
ನನ್ನೊಳ ಭಾದಿಸುವ ಭಾವಗಳ ತೊಳಲುವಿಕೆಗೆ
ಬಿಡುಗಡೆ,ಮುಕ್ತಿಯನ್ನಿತ್ತಿದ್ದೇನೆ ಸಂತಸದಿಂದೆ;

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...