Wednesday, October 2, 2013

ಕಾಯಕ

ಸಮಸ್ಯೆ ಹುಟ್ಟುಹಾಕುವುದು ಕಷ್ಟವೇನಲ್ಲ
ಸ್ವಾರ್ಥ ಸಾಧನೆಗೆ ಏನು ಬೇಕಾದರೂ ಮಾಡುವರಲ್ಲ
ಆಗುವುದಿಲ್ಲ, ಮಾಡುವುದಿಲ್ಲ ಎಂದೆನ್ನುವುದಕ್ಕೆ
ಕಾರಣಗಳು ಬೇಕಿಲ್ಲ ಏಕೆಂದರೆ ಕುಂಟು ನೆಪ,ಕಳ್ಳ ನೆವ ಇಲ್ಲಿ ನೂರಿವೆ;
ಹೆಜ್ಜೆ ಹೆಜ್ಜೆಗೂ ಸಿಗುವುದು ಕಾರಣ
ಕೆಲಸ ಮುಂದೂಡಲು......
ಇದೇ ನಡತೆ ಮೈಗೂಡಿದೆ ಹಲವರಿಗೆ
ಸೊರಗುತಿಗೆ ಕಾಯಕ,ಕಾಲ
ಕಾಯಕವೇ ಕೈಲಾಸ ವೆಂದವ ಬಿಕ್ಕಳಿಸುತ್ತಿದ್ದಾನೆ
ದುಡಿಮೆಯೇ ದೇವರೆಂದವ ಕಾಣೆಯಾಗಿದ್ದಾನೆ.

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...