Saturday, October 19, 2013

ಮಾತು-ಮೌನ

ಪ್ರತಿದಿನವೂ ನಾವಿಲ್ಲಿ ಬದುಕಬೇಕು
ಏಕೆ? ಎಂಬ ಪ್ರಶ್ನೆ ಮನದಲ್ಲಿ ಮೂಡದಹಾಗೆ
ಮನದಲ್ಲಿ ನೂರು ಯೋಚನೆ,ಯಾಚನೆ
ನೋವು,ಸಂತಸ,ಗುರಿ ನಡೆಸುವುದು ಮುಂದಕ್ಕೆ||

ಒಂದು ಮಾತು ಹೆಚ್ಚು,ಒಂದು ಮಾತು ಕಡಿಮೆ
ನೂರು ಭಾವನೆಗಳ ಹುಟ್ಟುಹಾಕುವುದು
ನೋವು ಸಂತಸವನಾಳುವುದೋ?
ಸಂತಸ ನೋವನಾಳುವುದೋ?
ನೋವು-ಸಂತಸ ಬದುಕೆಂಬ ನಾಣ್ಯದ ಎರಡು ಮುಖಗಳು||

ಮಾತು ಮಾತು ಮಾತು ಮನದ ಭಾವಗಳ ಹೊರಹಾಕುವ ಸಾಧನ
ಮೌನ ಮೌನ ಮೌನ ನಮ್ಮೊಳಗಿನ ಭಾವಗಳ ಬಚ್ಚಿಟ್ಟುಕೊಳ್ಳುವ ಸಾಹಸ
ಮಾತು-ಮೌನ ನಮ್ಮ ವ್ಯಕ್ತಿತ್ವದ ಪ್ರಶಸ್ತಿ ಪತ್ರ
ಯಾವುದೂ ಹೆಚ್ಚಾಗಬಾರದು,ಕಡಿಮೆಯಾಗಬಾರದು
ಸಮಭಾವ,ಸಮಚಿತ್ತ,ಸಮಹಿತ ಸಮ್ಮೇಳನ ಬದುಕು ಭಾವಮೇಳ||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...