ಕನ್ನಡ ಸಮ್ಮೇಳನ-೨೦೧೩


ಮತ್ತೊಂದು ಕನ್ನಡ ಸಮ್ಮೇಳನ ಸದ್ದಿಲ್ಲದೆ
ಇತಿಹಾಸ ಪುಟಗಳ ಸೇರಿತು ಹೊಸತನವಿಲ್ಲದೆ!
ಮರೆತಾದರೂ ಹೇಗೆ ಮರೆಯೋಣ ಹೇಳಿ
ಜೋತು ಬಿದ್ದಿದ್ದೇವೆ ಯಾರೋ ಹಾಕಿದ ಆಲದ ಮರಕ್ಕೆ!
ಮುಂದೆ ಸಾಗದೆ ಇದ್ದ ಜಾಗದಲ್ಲೇ ನಿಂತು
ಅಡಿ ಇಡಲಾಗದೆ ಮುಂದೆ, ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೇವೆ!
ಸಾಪೇಕ್ಷ ಸಿದ್ಧಾಂತಕ್ಕೆ ಸೋತು;
ಮುಂದೆ ಹೋಗುವವರ ಕಂಡು;
ನಾವು ಮುನ್ನಡೆಯುತ್ತಿದ್ದೇವೆಂಬ ಭ್ರಮೆಯಲ್ಲಿದ್ದೇವೆ!
ತಂತ್ರಾಂಶ,ಸುಧಾರಣೆ,ಹೊಸತನ,ಆವಿಷ್ಕಾರ
ಎಲ್ಲೋ ಕೇಳಿದ ಹೊಸಪದಗಳಂತೆ ತೋರುತ್ತಿವೆ!
ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ ನಿರಂತರವಾಗಿ
ಈಗಿನದು ಮುಂದಿನ ಕ್ಷಣದಲ್ಲಿ ಬದಲಾಗಿರುತ್ತದೆ
ಕನ್ನಡ ಭಾಷೆ,ಕನ್ನಡ ಬಳಕೆ ಮಾತ್ರ ಎಂದಿನಂತೆ ಸೊರಗಿದೆ
ಚರ್ಚೆ,ಸವಾಲು,ಆವಿಷ್ಕಾರಗಳು ಕನ್ನಡಕ್ಕೆ ಎಲ್ಲಿಂದ ಬರಬೇಕು?
ಕನ್ನಡ ಸಂಕೀರ್ಣವಾಗಿ,ಕನ್ನಡಿಗರ ಸಂಕುಚಿತತೆಗೆ ಬಲಿಯಾಗಿ ಬೆಳೆಯಲಾರದೆ,ನಿಂತನೀರಾಗಿ
ಬೆಂಗಳೂರಿನ ಕೆರೆಗಳ ಸ್ಥಿತಿ ಕನ್ನಡ ಭಾಷೆಗೆ ಬಂದೊದಗಿದೆ;
ಇರುವ ಶಬ್ದಗಳೇ, ಪದಗಳೇ ಬಳಕೆಯಾಗದೆ ಕಣ್ಮರೆಯಾಗಿತ್ತಿದೆ;
ಕನ್ನಡನಾಡಲ್ಲೇ ಕನ್ನಡಶಾಲೆಗಳು ನೆಲೆಕಳೆದುಕೊಳ್ಳುತ್ತಿವೆ;
ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ನಾವು ಒಳಗಾಗಿದ್ದೇವೆ;
ಆಂಗ್ಲ ಶಾಲೆಗಳು ಕನ್ನಡ ಶಾಲೆಗಳ ನುಂಗುತ್ತಿವೆ;
ನಮ್ಮದೇ ಸಿನಿಕತೆಗೆ;
ಅನ್ಯಭಾಷೆಗಳ ಒತ್ತಡಕ್ಕೆ ಸಿಲುಕಿದೆ ಕನ್ನಡ;
ಕನ್ನಡಿಗರ ಕೈಯಲ್ಲೇ ಅವಮಾನಿಸಲ್ಪಟ್ಟಿದೆ ಕನ್ನಡ;
ಇನ್ನು ಸಾಹಿತಿ,ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಬಲಿಕೊಡುತ್ತಿದ್ದಾರೆ ಕನ್ನಡವನ್ನು;
ವಿಜ್ಯಾನ,ತಂತ್ರಜ್ಯಾನ ಹೊಸಹೊಸ ದಾರಿಗಳು ತೆರೆದಿಕೊಳ್ಳುತ್ತಿದೆ;
ಬೇರೆ ಭಾಷೆಗಳು ಆಕ್ರಮಿಸಿದರೆ,ಕನ್ನಡ ಮಾತ್ರ ನರಳಿದೆ;
ಪ್ರಪಂಚವನ್ನು ಕನ್ನಡದ ಕಂಗಳಿಂದ ನೋಡುವ.ಅರಿವ ಭಾಗ್ಯ ಕನ್ನಡ ಕಂದರಿಗಿಲ್ಲ;
ಆರ ಸೌಭಾಗ್ಯಕ್ಕೋ!,ಆರ ಅನುಕೂಲಕ್ಕೋ?
ಬೆಳಕಿಗೆ ಬಾಗಿಲ ತೆರೆಯದೆ, ಕತ್ತಲಲ್ಲಿದ್ದೇವೆ ಎಂದು ಬೊಬ್ಬೆಹೊಡೆಯುತ್ತಿದ್ದೇವೆ ನಾವು;
ಎಷ್ಟು ಸಮ್ಮೇಳನಗಳು ಮಾಡಿದರೂ....
ಕೋಟಿ ಕೋಟಿ ಹಣವ ಸುರಿದರೂ.....
ನಾವೇ ಹಾಕಿಕೊಂಡ ಬೇಡಿಯ ಕಳಚದಿರೆ ಸ್ವಾತಂತ್ರವೆಂಬುದಿದೆಯೇ?
ಕನ್ನಡ,ಕನ್ನಡ,ಕನ್ನಡ,ಕನ್ನಡ
ಪ್ರಪಂಚಕ್ಕೆ ಸಂವಾದಿಯಾಗಬಲ್ಲುದೇ?

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...