Saturday, February 9, 2013

ನೋವಿನ ವಿಧಾಯ


ಎಲ್ಲವನ್ನೂ ಬರೆದುಬಿಟ್ಟಿದ್ದಾನೆ ಅವನು
ವಿಧಿಯಾಟವೆನ್ನುವೆಯೋ?
ವಿಧಿಲಿಖಿತವೆನ್ನುವೆಯೋ?
ನಮ್ಮ-ನಮ್ಮ ಪಾತ್ರಗಳು ಮುಗಿದ ಮೇಲೆ
ರಂಗಸ್ಥಳದಲ್ಲಿ ನೆಲೆನಿಲ್ಲಲಾದೀತೇ?
ನಮ್ಮ-ನಮ್ಮ ಆಟಗಳು ಮಿಗಿದ ಮೇಲೆ
ನೇಪಥ್ಯಕ್ಕೆ ಸರಿಯಲೇಬೇಕಲ್ಲವೇ?
ಯಾರು ಇರಲಿ, ಯಾರು ಹೋಗಲಿ
ಜೀವನವೆಂದೂ ನಿಂತ ನೀರಾಗಿರದೆ
ತನ್ನಷ್ಟಕ್ಕೆ ತಾನು ಮುಂದೆ ಹೋಗುತ್ತಲೇ ಇರುತ್ತದೆ
ನಮ್ಮನ್ನು ನಾವು ಬದಲಾವಣೆಗೆ ಒಡ್ಡಿಕೊಳ್ಳಬೇಕು
ನಮ್ಮ ಪಾಲಿನದೆಲ್ಲವನ್ನೂ ನಾವು ಅನುಭವಿಸಲೇಬೇಕು
ಇದ್ದಾಗ ಮುಖವನ್ನೂ ಸಹ ನೋಡಬಯಸದವರು
ಹೋದ ಮೇಲೆ ಮುಖನೋಡಲು ಸಿಗಲಿಲ್ಲವೆಂದು ಕೊರಗುವರು
ಇದೇ ಜೀವನ..
ಇದೇ ಅನುಭವ...
ಇದೇ ವಿಧಿಯಾಟವೆನ್ನೋಣವೇ?

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...