Someಕ್ರಾಂತಿ


ಜೀವನ ನಿಂತ ನೀರಾಗಿದೆ ಎನಿಸುವಷ್ಟರಲ್ಲೇ
ಮತ್ತೆ ಬಂದಿದೆ ಸಂಕ್ರಾಂತಿ
ಜೀವನದಲ್ಲಿ ಸಣ್ಣ ಕಾಂತಿ ತಂದಿದೆ
ಎಲ್ಲರಲ್ಲೂ ತವಕವಿದೆ,ಹುಡುಕಾಟವಿದೆ
ನಗರದ ಬೆಂಬಿಡದ ಯಾಂತ್ರಿಕತೆಗೆ ಬೇಸತ್ತು
ಒಂದು ದಿನ ರೆಸಾರ್ಟ್ ನಲ್ಲಿ ವಿಶ್ರಾಂತಿ ಅರಸುವ ನಾವು
ಹಳ್ಳಿಯ ಜೀವನದ ಸರಳತೆಗೆ ಮನಸೋಲದವರು
ಹಳ್ಳಿಯ ಸಮಸ್ಯೆಗಳನ್ನೇ ದೊಡ್ಡದು ಮಾಡಿ ಮೂಗುಮುರಿಯುವೆವು
ಹಳ್ಳಿಹಬ್ಬದ ನೆಪದಲ್ಲಿ ರಜೆಯ ಮಜೆಯನ್ನು ಅನುಭವಿಸುವವರು
ಎಳ್ಳು-ಬೆಲ್ಲ ತಿಂದು ಮನವ ಬದಲಾಯಿಸಿಕೊಳ್ಳುವ ಅವಶ್ಯಕತೆ
ಈ ಹಬ್ಬ ಸಾರುತಿದೆ,ಕಾಲ ಬದಲಾಗಲಿ ಮನಸ್ಸು ನಿರ್ಮಲವಾಗಿರಲಿ.
ಸರಳತೆಯ ಕ್ರಾಂತಿ ಎಲ್ಲರ ಮನದಲ್ಲೂ ಉದಯವಾಗಲಿ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...