Saturday, January 26, 2013

ಕರುಣಾಸಾಗರ


ಹಾಡು ಹೇಳಬೇಕ್ಕೆನ್ನುವ ಆಸೆ
ಆದರೆ ಹಾಡಲಾರೆ:
ವರ್ಣಮಯ ಚಿತ್ರಗಳ ಬರೆಯುವ ಆಸೆ
ಆದರೆ ಬರೆಯಲಾರೆ;
ಉತ್ತಮ ಕವನಗಳ ಬರೆಯುವ ಆಸೆ
ಆದರೆ ಕವನ ರಚಿಸಲಾರೆ;
ಸುಂದರ ಶಿಲಾಕೃತಿಗಳ ಕೆತ್ತುವಾಸೆ
ಆದರೆ ಕೆತ್ತಲಾರೆ;
ಉತ್ತಮವಾಗಿ ಅಭಿನಯಿಸುವಾಸೆ
ಆದರೆ ಅಭಿನಯಿಸಲಾರೆ;
ಎಲ್ಲರ ಹೃದಯ ಗೆಲ್ಲುವಾಸೆ
ಆದರೆ ಗೆಲ್ಲಲಾರೆ;
ಜೀವನದಲ್ಲಿ ಏನೇನೋ ಆಗುವಾಸೆ
ಆದರೆ ಎಲ್ಲವೂ ನಾನಾಗಲಾರೆ;
ದೇವ ನಾನೇನಾಗಬೇಕೆಂಬುದು ನಿನ್ನಾಸೆ
ನೀ ಹೇಳಲಾರೆಯಾ?
ಅಥವಾ ಅರಿವು ಮೂಡಿಸಲಾರೆಯಾ?
ನಿನ್ನ ಹಾಡು ಹೊಗಳಲೂ ನನ್ನಿಂದಾಗದು
ಎಲ್ಲಕ್ಕೂ ನಿನ್ನ ಕರುಣೆಯ ಅಗತ್ಯವಿದೆ ದೇವ!;
ನಿನ್ನ ಕರುಣೆಯಿಲ್ಲದೆ
ಇಲ್ಲಿ ಏನೂ ಚಲಿಸದು ದೇವ
ಕರುಣಾಸಾಗರನೆಂದು ಕರೆವರು ನಿನ್ನ
ಒಂದು ಬಿಂದು ಕರುಣಾರಸವ ನೀ ನೀಡೆಯಾ ದೇವ.

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...