Wednesday, December 28, 2011

ಬದಲಾವಣೆಗೆ ಪಕ್ಕಾಗು


ಮನದ ನೋವೇ ಗರಿಗೆದರಬೇಡ
ಮನದ ನೆಮ್ಮದಿಯ ಹಾಳುಗೆಡವಬೇಡ
ಮನಕ್ಕೆ ನೋವಾಗಿದೆ ನಿಜ, ಬೇಡ, ಬೇಡ
ಮತ್ತೆ ಮತ್ತೆ ನೆನಪಿಸಿ ಎದೆಗುಂದಿಸಬೇಡ||

ಮನದಲ್ಲಿ ನೋವಿದೆ
ನೋವಿಗೆ ಪರಿಹಾರವಿದೆ
ತುಸು ಕಾಯಬೇಕಿದೆ
ತಾಳ್ಮೆಯ ಅಗತ್ಯವಿದೆ||

ಮನವೇ ಬಲವಾಗು
ನೋವುಗಳ ಪ್ರೀತಿಸಿ ತಲೆಬಾಗು
ನವೋದಯದ ಸ್ಪರ್ಧೆಗೆ ಛಲವಾಗು
ಬದಲಾವಣೆಗೆ ಪಕ್ಕಾಗು||

No comments:

Post a Comment

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ , ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ , ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು , ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು .   ...