Tuesday, April 26, 2011

.|| ಶ್ರೀರಂಗಪಟ್ಟಣದ ರಂಗನಾಥ||


ಮಂದಹಾಸದಿ ಮಲಗಿಹನು ರಂಗನಾಥ


ಸುತ್ತಲೂ ತಂಪು ಮಾಡಿ


ಪಾದ ಸೇವೆಗೆ ಕಾಯುತಿಹಳು ಕಾವೇರಿ


ರಂಗನಾಥ ಗುಡಿಯಲ್ಲಿ ಬಂಧಿ


ಕಾವೇರಿ ಹೊರಗಡೆ ಮುಕ್ತಳು


ಯಾರೇ ಬಂದರೂ


ಯಾರೇ ಹೋದರೂ


ಮೊದಲು ಕಾವೇರಿ


ಆನಂತರ ರಂಗನಾಥ ನ ದರುಷನ


ಜುಳ.ಜುಳನೇ ಸದ್ದು ಮಾಡಿ ಕೇಳುವಳು


" ರಂಗನಾಥ ಕುಶಲವೇ?"


ರಂಗನಾಥ ಮುಗುಳುನಗೆಯಲ್ಲೇ ಉತ್ತರ


ಪಾಪ ತೊಳೆಯುವ ಕಾವೇರಿ


ಮುಕ್ತಿಕೊಡುವ ರಂಗನಾಥ


ಲೋಕಸೇವೆಗೈಯ್ಯುತಿಹರು ಮೌನವಾಗಿ


ಎಂಥ ಜೋಡಿ


ಏನೋ ಮೋಡಿ


ಮತ್ತೆ ಮತ್ತೆ ನೋಡುವ ಸೆಳೆತವಿದೆ


ಇಂಥ ಜೋಡಿಯ ನೋಡದ ಕಂಗಳೇತಕೆ ನೀವೇ ಹೇಳಿ?


 

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...