Tuesday, April 26, 2011

.|| ಶ್ರೀರಂಗಪಟ್ಟಣದ ರಂಗನಾಥ||


ಮಂದಹಾಸದಿ ಮಲಗಿಹನು ರಂಗನಾಥ


ಸುತ್ತಲೂ ತಂಪು ಮಾಡಿ


ಪಾದ ಸೇವೆಗೆ ಕಾಯುತಿಹಳು ಕಾವೇರಿ


ರಂಗನಾಥ ಗುಡಿಯಲ್ಲಿ ಬಂಧಿ


ಕಾವೇರಿ ಹೊರಗಡೆ ಮುಕ್ತಳು


ಯಾರೇ ಬಂದರೂ


ಯಾರೇ ಹೋದರೂ


ಮೊದಲು ಕಾವೇರಿ


ಆನಂತರ ರಂಗನಾಥ ನ ದರುಷನ


ಜುಳ.ಜುಳನೇ ಸದ್ದು ಮಾಡಿ ಕೇಳುವಳು


" ರಂಗನಾಥ ಕುಶಲವೇ?"


ರಂಗನಾಥ ಮುಗುಳುನಗೆಯಲ್ಲೇ ಉತ್ತರ


ಪಾಪ ತೊಳೆಯುವ ಕಾವೇರಿ


ಮುಕ್ತಿಕೊಡುವ ರಂಗನಾಥ


ಲೋಕಸೇವೆಗೈಯ್ಯುತಿಹರು ಮೌನವಾಗಿ


ಎಂಥ ಜೋಡಿ


ಏನೋ ಮೋಡಿ


ಮತ್ತೆ ಮತ್ತೆ ನೋಡುವ ಸೆಳೆತವಿದೆ


ಇಂಥ ಜೋಡಿಯ ನೋಡದ ಕಂಗಳೇತಕೆ ನೀವೇ ಹೇಳಿ?


 

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...