Tuesday, April 26, 2011

.|| ಶ್ರೀರಂಗಪಟ್ಟಣದ ರಂಗನಾಥ||


ಮಂದಹಾಸದಿ ಮಲಗಿಹನು ರಂಗನಾಥ


ಸುತ್ತಲೂ ತಂಪು ಮಾಡಿ


ಪಾದ ಸೇವೆಗೆ ಕಾಯುತಿಹಳು ಕಾವೇರಿ


ರಂಗನಾಥ ಗುಡಿಯಲ್ಲಿ ಬಂಧಿ


ಕಾವೇರಿ ಹೊರಗಡೆ ಮುಕ್ತಳು


ಯಾರೇ ಬಂದರೂ


ಯಾರೇ ಹೋದರೂ


ಮೊದಲು ಕಾವೇರಿ


ಆನಂತರ ರಂಗನಾಥ ನ ದರುಷನ


ಜುಳ.ಜುಳನೇ ಸದ್ದು ಮಾಡಿ ಕೇಳುವಳು


" ರಂಗನಾಥ ಕುಶಲವೇ?"


ರಂಗನಾಥ ಮುಗುಳುನಗೆಯಲ್ಲೇ ಉತ್ತರ


ಪಾಪ ತೊಳೆಯುವ ಕಾವೇರಿ


ಮುಕ್ತಿಕೊಡುವ ರಂಗನಾಥ


ಲೋಕಸೇವೆಗೈಯ್ಯುತಿಹರು ಮೌನವಾಗಿ


ಎಂಥ ಜೋಡಿ


ಏನೋ ಮೋಡಿ


ಮತ್ತೆ ಮತ್ತೆ ನೋಡುವ ಸೆಳೆತವಿದೆ


ಇಂಥ ಜೋಡಿಯ ನೋಡದ ಕಂಗಳೇತಕೆ ನೀವೇ ಹೇಳಿ?


 

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...