ಮನಸ್ಸಿನಲ್ಲಿ ಯೋಚಿಸುತ್ತೇನೆ
ಹತ್ತು ಹಲವು ಬಾರಿ
ಏಕೆ ಇವರು ಹೀಗೆ?
ಮನಸ್ಸು ಅರ್ಥಮಾಡಿಕ್ಕೊಳ್ಳುವುದಿಲ್ಲವೇಕೆ?
ನೋವಾಗುತ್ತೆ ನನಗೆ
ನಾನು ಅರ್ಥಮಾಡಿಕೊಳ್ಳಬಲ್ಲೆ
ಅವರ ಮನಸ್ಸಿನಲ್ಲೇನು ಕೋಲಾಹಲವಿದೆಯೆಂದು
ಆದರೆ ಅವರಿಗೇ ನನ್ನ ಮೇಲೆ ನಂಬಿಕೆಯಿಲ್ಲವೇಕೋ ತಿಳಿಯೆ!
ಅವರ ಸುತ್ತಲೂ ಇರುವವರು ಸರಿಯಿಲ್ಲವೆಂದು ಕಿಡಿಕಾರಿದ್ದಾಗಿದೆ
ಕೋಪಗೊಂಡು ಕಿರಿಚಾಡಿದ್ದಾಗಿದೆ
ಅರ್ಥಮಾಡಿಕೊಳ್ಳದ ಮನಸ್ಸುಗಳು
ಅತೃಪ್ತಿಯ ಪ್ರೇತಾತ್ಮಗಳು
ದಹಿಸಿಕೊಳ್ಳುತ್ತಿದ್ದಾರೆ ಮನಸ್ಸನ್ನು ಮತ್ಸರದ ದಾವಾಗ್ನಿಯಲ್ಲಿ
ಕೈಯಲ್ಲಿ ಹಣವಿದೆ
ತಲೆಗೊಂದು ಸೂರಿದೆ
ಅರ್ಥಮಾಡಿಕೊಳ್ಳುವ ಮಕ್ಕಳಿದ್ದಾರೆ
ಶಾಂತಿಯಿಂದಿರಲು ಮನಸ್ಸಿಲ್ಲವೇಕೋ ತಿಳಿಯೆ?
ಮನಸ್ಸಿನಲ್ಲಿ ಶಾಂತಿ ದೇವರು ಕೊಡಲಿಲ್ಲವೇಕೆ?
ಅದೂ ಸರಿ ಶಾಂತಿ ನಮ್ಮಲಿಯೇಯಿದೆ, ಹುಡುಕಲಿ ಎಲ್ಲಿ?
ದೇವರು ಜ್ನಾನ ಕೊಟ್ಟಿದ್ದಾನೆ
ಬುದ್ದಿ ಕೊಟ್ಟಿದ್ದಾನೆ
ಶಾಂತಿ ನೆಮ್ಮದಿಯ ಹುಡುಕಲಾಗದ ಅಂಧರು ನಾವೆಲ್ಲಾ
ಸಂತೋಷ ಕೈಯ ಮುಂದಿದ್ದರೂ ದಕ್ಕಿಸಿಕೊಳ್ಳಲಾಗದ ಹೆಳವರು ನಾವೆಲ್ಲಾ
Wednesday, April 20, 2011
Subscribe to:
Post Comments (Atom)
ಕಡಲೇ.....
ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ರವಿ ಜಾರಿದ ಕೆಲಸವಾಯ್ತೆಂದು ಲೋಕರೂಡಿ ಹಕ್ಕಿಗಳು ಗೂಡು ಸೇರಿದವು ಕತ್ತಲಾವರಿಸಿ,ನೀರವತೆ ಪಸರಿಸಿ ಪ್ರೇಮ ಹೃದಯಗಳಲ್ಲಿ ಪ್ರಣಯದ ಕಿಚ್ಚು ಹೊತ್ತಿಸಿ..... ಹೊನ್ನ ಚಂದ್ರಿಕೆಗ...
No comments:
Post a Comment