Wednesday, April 20, 2011

- ಅಂಧರು-

ಮನಸ್ಸಿನಲ್ಲಿ ಯೋಚಿಸುತ್ತೇನೆ
ಹತ್ತು ಹಲವು ಬಾರಿ
ಏಕೆ ಇವರು ಹೀಗೆ?
ಮನಸ್ಸು ಅರ್ಥಮಾಡಿಕ್ಕೊಳ್ಳುವುದಿಲ್ಲವೇಕೆ?
ನೋವಾಗುತ್ತೆ ನನಗೆ
ನಾನು ಅರ್ಥಮಾಡಿಕೊಳ್ಳಬಲ್ಲೆ
ಅವರ ಮನಸ್ಸಿನಲ್ಲೇನು ಕೋಲಾಹಲವಿದೆಯೆಂದು
ಆದರೆ ಅವರಿಗೇ ನನ್ನ ಮೇಲೆ ನಂಬಿಕೆಯಿಲ್ಲವೇಕೋ ತಿಳಿಯೆ!
ಅವರ ಸುತ್ತಲೂ ಇರುವವರು ಸರಿಯಿಲ್ಲವೆಂದು ಕಿಡಿಕಾರಿದ್ದಾಗಿದೆ
ಕೋಪಗೊಂಡು ಕಿರಿಚಾಡಿದ್ದಾಗಿದೆ
ಅರ್ಥಮಾಡಿಕೊಳ್ಳದ ಮನಸ್ಸುಗಳು
ಅತೃಪ್ತಿಯ ಪ್ರೇತಾತ್ಮಗಳು
ದಹಿಸಿಕೊಳ್ಳುತ್ತಿದ್ದಾರೆ ಮನಸ್ಸನ್ನು ಮತ್ಸರದ ದಾವಾಗ್ನಿಯಲ್ಲಿ
ಕೈಯಲ್ಲಿ ಹಣವಿದೆ
ತಲೆಗೊಂದು ಸೂರಿದೆ
ಅರ್ಥಮಾಡಿಕೊಳ್ಳುವ ಮಕ್ಕಳಿದ್ದಾರೆ
ಶಾಂತಿಯಿಂದಿರಲು ಮನಸ್ಸಿಲ್ಲವೇಕೋ ತಿಳಿಯೆ?
ಮನಸ್ಸಿನಲ್ಲಿ ಶಾಂತಿ ದೇವರು ಕೊಡಲಿಲ್ಲವೇಕೆ?
ಅದೂ ಸರಿ ಶಾಂತಿ ನಮ್ಮಲಿಯೇಯಿದೆ, ಹುಡುಕಲಿ ಎಲ್ಲಿ?
ದೇವರು ಜ್ನಾನ ಕೊಟ್ಟಿದ್ದಾನೆ
ಬುದ್ದಿ ಕೊಟ್ಟಿದ್ದಾನೆ
ಶಾಂತಿ ನೆಮ್ಮದಿಯ ಹುಡುಕಲಾಗದ ಅಂಧರು ನಾವೆಲ್ಲಾ
ಸಂತೋಷ ಕೈಯ ಮುಂದಿದ್ದರೂ ದಕ್ಕಿಸಿಕೊಳ್ಳಲಾಗದ ಹೆಳವರು ನಾವೆಲ್ಲಾ

No comments:

Post a Comment

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...