ಅಂದು ೧೮.೦೧.೨೦೦೮ ರ ಶುಕ್ರವಾರ ಗ್ರೀಷ್ಮ ಋತು, ದಕ್ಷಿಣಾಯಣ, ಹುಣ್ಣಿಮೆ
ಮಟ ಮಟ ಮಧ್ಯಾಹ್ನ
ನೆತ್ತಿಯ ಮೇಲೆ ಬಿಸಿಲ ಝಳ
ಹೆರಿಗೆಯ ನೋವಿಲ್ಲ
ಆತಂಕದ ಛಾಯೆ ಯಾರಲ್ಲೂ ಇರಲಿಲ್ಲ
ವೈದ್ಯೆಯ ಅಪ್ಪಣೆಯಾಗಿತ್ತು
"ಸಿದ್ದರಾಗಿರಿ ಆಪರೇಷನ್ಗೆ.......
ಕಾಯುವುದು ಎಲ್ಲಿಲ್ಲ ಹೇಳಿ
ಎಲ್ಲವೂ ಓಳ್ಳೆಯದೇ ಆಗಲಿದೆ
ಅವಳಲ್ಲಿ ಭಯದ ಭಾವ
ಹಣೆಯ ಮೇಲೆ ಬೆವರಿನ ಲೇಪ
ಆಸ್ಪತ್ರೆಯ ಬಿಸ್ಕತ್ ಬಣ್ಣದ ಗೌನು
ಗಾಲಿ ಖುರ್ಚಿಯಲ್ಲಿ ವಿಶೇಷ ಕೋಣೆಯಿಂದ ಆಪರೇಷನ್ ಕೊಠಡಿಗೆ ಪಯಣ
ಹೋದ ಸಮಯ ೧ ಗಂಟೆ ೫೦ ನಿಮಿಷ
ಹಸಿರು ಬಣ್ಣದ ಗೌನಿನ ನರ್ಸ್
ಕೈಯಲ್ಲಿ ಮಗು
ಸಮಯ ಆಗ ೨ ಗಂಟೆ ೨೦ ನಿಮಿಷ ಮೊದಲ ಅಳು
ಲೋಕಕ್ಕೆ ಪಾದಾರ್ಪಣೆ ಮಾಡಿದ ಮೇಲೆ
ಮೊದಲ ಮಜ್ಜನ ಜಾನ್ಸನ್ ಸೋಪಿನಿಂದ
ಹಾಗೂ ಮೈಗೆಲ್ಲಾ ಜಾನ್ಸನ್ ಬೇಬಿ ಸಾಫ್ಟ್ ಪೌಡರಿನಿಂದ ಲೇಪ
ಕಣ್ಣು ಮುಚ್ಚಿ ನಿದ್ದೆ- ಮೌನ ಧ್ಯಾನಕ್ಕೆ ಕುಳಿತ ಮುನಿಯಂತೆ
ಮೂರು ದಿನ ಉಪವಾಸ, ಗಾಂಧಿ ತತ್ವದಿಂದಲೇ ಪಾದಾರ್ಪಣೆ.
Subscribe to:
Post Comments (Atom)
ನನ್ನ ಭರವಸೆ
ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
No comments:
Post a Comment