ಅಂದು ೧೮.೦೧.೨೦೦೮ ರ ಶುಕ್ರವಾರ ಗ್ರೀಷ್ಮ ಋತು, ದಕ್ಷಿಣಾಯಣ, ಹುಣ್ಣಿಮೆ
ಮಟ ಮಟ ಮಧ್ಯಾಹ್ನ
ನೆತ್ತಿಯ ಮೇಲೆ ಬಿಸಿಲ ಝಳ
ಹೆರಿಗೆಯ ನೋವಿಲ್ಲ
ಆತಂಕದ ಛಾಯೆ ಯಾರಲ್ಲೂ ಇರಲಿಲ್ಲ
ವೈದ್ಯೆಯ ಅಪ್ಪಣೆಯಾಗಿತ್ತು
"ಸಿದ್ದರಾಗಿರಿ ಆಪರೇಷನ್ಗೆ.......
ಕಾಯುವುದು ಎಲ್ಲಿಲ್ಲ ಹೇಳಿ
ಎಲ್ಲವೂ ಓಳ್ಳೆಯದೇ ಆಗಲಿದೆ
ಅವಳಲ್ಲಿ ಭಯದ ಭಾವ
ಹಣೆಯ ಮೇಲೆ ಬೆವರಿನ ಲೇಪ
ಆಸ್ಪತ್ರೆಯ ಬಿಸ್ಕತ್ ಬಣ್ಣದ ಗೌನು
ಗಾಲಿ ಖುರ್ಚಿಯಲ್ಲಿ ವಿಶೇಷ ಕೋಣೆಯಿಂದ ಆಪರೇಷನ್ ಕೊಠಡಿಗೆ ಪಯಣ
ಹೋದ ಸಮಯ ೧ ಗಂಟೆ ೫೦ ನಿಮಿಷ
ಹಸಿರು ಬಣ್ಣದ ಗೌನಿನ ನರ್ಸ್
ಕೈಯಲ್ಲಿ ಮಗು
ಸಮಯ ಆಗ ೨ ಗಂಟೆ ೨೦ ನಿಮಿಷ ಮೊದಲ ಅಳು
ಲೋಕಕ್ಕೆ ಪಾದಾರ್ಪಣೆ ಮಾಡಿದ ಮೇಲೆ
ಮೊದಲ ಮಜ್ಜನ ಜಾನ್ಸನ್ ಸೋಪಿನಿಂದ
ಹಾಗೂ ಮೈಗೆಲ್ಲಾ ಜಾನ್ಸನ್ ಬೇಬಿ ಸಾಫ್ಟ್ ಪೌಡರಿನಿಂದ ಲೇಪ
ಕಣ್ಣು ಮುಚ್ಚಿ ನಿದ್ದೆ- ಮೌನ ಧ್ಯಾನಕ್ಕೆ ಕುಳಿತ ಮುನಿಯಂತೆ
ಮೂರು ದಿನ ಉಪವಾಸ, ಗಾಂಧಿ ತತ್ವದಿಂದಲೇ ಪಾದಾರ್ಪಣೆ.
Wednesday, April 20, 2011
Subscribe to:
Post Comments (Atom)
ಮೌನ ನೃತ್ಯ
ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!
No comments:
Post a Comment