Sunday, March 31, 2013

ಘೋಷಣೆ-ಪೋಷಣೆ


ಮತ್ತೊಂದು ಚುನಾವಣೆಯ ಘೋಷಣೆ
ಎಲ್ಲಾ ಪಕ್ಷಗಳಿಂದ ಮತದಾನ ಪ್ರಭುವ ಪೋಷಣೆ
ಹಣ,ಹೆಂಡದಿಂದ ಮತದಾರನ ಅಭಿಷೇಕ
ಮತ್ತೈದು ವರ್ಷ ನಿಲ್ಲದು ಮತದಾರನ ಶೋಕ

Friday, March 29, 2013

ಚುನಾವಣೆ-ಭ್ರಷ್ಟಾಚಾರ


ಚುನಾವಣೆಗಳ ಸಾಲು ಸಾಲು ಮುಂದೆ
ಪಕ್ಷಗಳ ತತ್ವಗಳು ಮಾರು ಮಾರು ಹಿಂದೆ
ಹಣ,ಹೆಂಡ ಹಂಚುವಿಕೆಯೇ ಎಲ್ಲಾ ಪಕ್ಷಗಳ ತಂತ್ರ
ಭ್ರಷ್ಟಾಚಾರದ ಹಣ, ಆಸ್ತಿಗಳಿಕೆಯ ತಂತ್ರ\\

ಗೀಳು


ಉಳ್ಳವರು shopper stop,
Meenakshi mall, Central,Forum mall ಗಳಿಗೆ ಹೋಗುವರು
ನಾನೇನು ಮಾಡಲಿ ಬಡವನಯ್ಯಾ!
Big bazaar, Gopalan mall, More ಗಳೇ ನಮಗೆ ಹಿತವಯ್ಯಾ!

ಕನಸು-ಕುತಂತ್ರ


ಕಾಣಬೇಕು ಕನಸು
ಮಾಡಬೇಕು ಮನಸು
ಧೃತಿಗೆಡದಿದ್ದರೆ ನನಸು
ಇದೇ ಜೀವನ ಮಂತ್ರ
ಸಾಧನೆಯೇ ಅದರ ತಂತ್ರ
ಹೊಡದೋಡಿಸಬೇಕಿದೆ ಅಡ್ಡದಾರಿಯ ಕುತಂತ್ರ\\

ಬಜೆಟ್-ಬಫೆಟ್


ಚಿದಂಬರಂ ಮಂಡಿಸಿದ್ದಾರೆ ವರ್ಷದ ಬಜೆಟ್
ಎಲ್ಲಾ ಕಡೆಗಳಲ್ಲೂ ಖೋತಾ
ಸಾಮಾನ್ಯನ ಜೇಬಿಗೆ ಮಾಡಿದ್ದಾರೆ ತೂತು
ಕನಸು ಕಾಣುತ್ತಿದ್ದಾರೆ ಎಲ್ಲರೂ ಆಗುತ್ತಾರೆಂದು ವಾರನ್ ಬಫೆಟ್||

ಮನ್ನಾ-ಕನ್ನಾ


ಸರ್ಕಾರ ಮಾಡಿತು ರೈತರ ಸಾಲ ಮನ್ನಾ
ಅಧಿಕಾರಿಗಳು,ರಾಜಕಾರಣಿಗಳು
ಹೊಂಚಿಹಾಕಿ ಕಾಯುತ್ತಿದ್ದಾರೆ
ರೈತರ ಜೇಬಿಗೆ ಕನ್ನಾ............

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...