ನಾಗರೀಕ ಪ್ರಜ್ಞೆ




ದಿನವೂ ನಿಲ್ಲುತ್ತೇನೆ ರಸ್ತೆಯ ಬದಿ
ಟ್ರಾಫಿಕ್ ಸಿಗ್ನಲ್ ನಲ್ಲಿ;
ಅಲ್ಲಿ ನಡೆಯುವ ವಿದ್ಯಮಾನಗಳನ್ನು
ಗಮನಿಸುತ್ತೇನೆ;
ಮನದಲ್ಲಿ ನೂರು ಯೋಚನೆಗಳು
ಮನೆಮಾಡುತ್ತವೆ;
ಅನೇಕ ಪ್ರಶ್ನೆಗಳು ಮನದಲ್ಲಿ
ಶಾಂತಿಯ ಕದಡುತ್ತದೆ;
ಆದರೆ ನಾನು ಮಾತ್ರ ಮೊಕ ಪ್ರೇಕ್ಷಕ;
ರಸ್ತೆ ನಿಯಮ ಉಲ್ಲಂಘಿಸುವವರು;
ಎಲ್ಲೆಂದರಲ್ಲೇ ಉಗಿಯುವವರು;
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರು;
ಬಹಿರ್ದೆಸೆಗೆ ಹೋಗುವವರು;
ಕಸವನ್ನು ರಸ್ತೆಯಲ್ಲೇ ಚಲ್ಲುವವರು;
ಎಲ್ಲವೂ ಅಯೋಮಯವಿಲ್ಲಿ;
ಶುಚಿಯ ಬಗ್ಗೆ ಎಲ್ಲರಿಗೂ ಗೊತ್ತು
ಶುಚಿಯ ಬಗ್ಗೆ ನೀವು ಅವರನ್ನೇ ಕೇಳಿ,
ಗಂಟೆಗಟ್ಟಲೆ ಮಾತನಾಡುವರು
ಆದರೆ ಅದನ್ನು ಪಾಲಿಸುವ ವಿಷಯದಲ್ಲಿ
ಎಲ್ಲರೂ ನಿಸ್ಸೀಮರೇ ಉಲ್ಲಂಘಿಸುವುದರಲ್ಲಿ;
ನಮಗೆ ನಾಗರೀಕ ಪ್ರಜ್ಞೆ ಬರುವುದಾದರೂ ಯಾವಾಗ?
ನೂರು ಬುದ್ಧರು;
ನೂರು ಗಾಂಧಿಗಳು;
ಹುಟ್ಟಿಬಂದರೂ ನಮ್ಮ ನಡುವಳಿಕೆ ತಿದ್ದಲು ಸಾಧ್ಯವೇ?
ಆ ದಿನ ಬರುವುದೇ?
ಆ ದಿನ ಕನಸಾಗದಿರಲಿ, ಕನಸಾಗದಿರಲಿ.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...