Tuesday, January 25, 2011

|| ಜ್ಣಾನದ ತೀರ||

ಬದುಕು ಬಾರವಾಗಬಾರದು
ಬಾಳಬಂಡಿಯ ಚಕ್ರ ಮುರಿಯಬಾರದು\
ಬದುಕು ಸಾಗಲಿ
ಕಾಲಚಕ್ರ ಉರುಳಲಿ\\

ಮತ್ತೆ ವಸಂತ ಬರುವ
ಪ್ರಕೃತಿಯಲಿ ಚೈತನ್ಯ ತುಂಬುವ\
ಮರಳಿ ತಂದ ಜೀವಕೆ ಹರುಷ
ನಮಗಂದೇ ಹೊಸ ವರುಷ\\

ಮುಪ್ಪು ನಮಗೆ
ಎಲ್ಲಿಂದಲೋ ಬಂದವರು ಇಲ್ಲಿಗೆ\
ನೂರು ದಾರಿ ಹರಿವ ನೀರು
ಸೇರುವ ಗುರಿ ಒಂದೇ\\

ನಾವು-ನೀವು ಭೇದ ಹೆಚ್ಚು
ನಮ್ಮ ನಿಲುವು ದೇವರಿಗೇ ಮೆಚ್ಚು\
ಅರಿವು ಮಾತ್ರ ದೂರ
ಎಂದು ಸೇರುವೆವೋ ಜ್ಣಾನದ ತೀರ\\

No comments:

Post a Comment

ಅಣುವಿನಿಂದ ಅನಂತದವರೆಗೆ

ಅದೇನೋ ನಾ ತಿಳಿಯೇ ! ಕಡಲ ಸೇರುವಾಗ ಹೃದಯ ಭಯದಿಂದ ಚಡಪಡಿಸುವುದು ! ನಾನು ಹರಿದು ಬಂದ ದಾರಿಯ ಹಿಂತಿರುಗಿ ನೋಡುವೆ , ಪರ್ವತಗಳ ಶಿಖರದ ತುದಿಯಿಂದ ಮೊದ...