Tuesday, December 29, 2015

ಅಶಾಕಿರಣ ನೀನೇ......

ಅಗೋ ನೋಡಲ್ಲಿ ಮಿಂಚೊಂದು ಮೂಡಿದೆ 
ಹೊಸ ಆಶಾಕಿರಣದ ಚೈತನ್ಯ ಹೊಮ್ಮಿದೆ
ದುಡಿವ ದೇಹ,ಸುಖವಿಲ್ಲದ ಮನ ದುಡಿಮೆ ಅನವರತ
ಸದಾ ತದೇಕ ಚಿತ್ತ ಮಾತೃಭೂಮಿಯ ಸೇವಾನಿರತ
ಕಣ್ಣೀರ ಒರೆಸುವರಿಲ್ಲ
ಕನಸ ಕಾಣುವ ಸೌಭಾಗ್ಯವಿಲ್ಲ
ದಣಿದ ದೇಹಕ್ಕೆ ತಂಪಾದ ನಿದ್ದೆಯಿಲ್ಲ
ನೀನೇ ದಿಕ್ಕು,ನೀನೇ ದೆಸೆ
ನಿನ್ನ ಪ್ರಾಣದ ಬೆಲೆ ತಿಳಿದವರಾರೂ ಇಲ್ಲಿಲ್ಲ
ನೀನಲ್ಲದೆ ನಮಗಾರೂ ಇಲ್ಲ
ನಿನ್ನ ಉಸಿರೇ ನಮ್ಮ ಪ್ರಾಣವಾಯು
ನಮ್ಮೆಲ್ಲರ ಚೈತನ್ಯದ ಅಶಾಕಿರಣ ನೀನೇ......

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...