Wednesday, December 30, 2015

ಸಂತಸ ನಿನ್ನಲಿ ಬರವೆ?

ಓ ನೋವೆ, ಓ ನೋವೇ
ಮರಳಿ ಏಕೆ ಬರುವೆ
ಮನವ ಚುಚ್ಚಿ ಏಕೆ ನಗುವೆ

ನೀ ಬಾ ಎಂದು ಕರೆದವರಾರು?
ಕರೆಯದೆ ಬರುವೆ
ಕಾಣದ ನೋವ ಏಕೆ ತರುವೆ?

ಶಾಂತವಾಗಿ ತುಳುಕುತ್ತಿತ್ತು ಮನದ ಕಡಲು
ಎಲ್ಲಿದಂಲೋ ಬಂತೊಂದು ಸುನಾಮಿ
ಎಲ್ಲವೂ ಅಲ್ಲೋಲಕಲ್ಲೋಲ

ಬರದೇ ಬರುವೆ
ನೋವ ಏಕೆ ತರುವೆ?
ಸಂತಸ ನಿನ್ನಲಿ ಬರವೆ?

Tuesday, December 29, 2015

ಏನ ಬೇಡಲಿ ಹೇಳು

ಏನ ಬೇಡಲಿ ನಿನಗೆ ಈ ಶುಭದಿನದಂದು
ಆ ದೇವನ ಬಳಿ ಹೇಳು ಗೆಳೆಯ 
ಅದು ಬೇಕು,ಇದು ಬೇಕು ಎನ್ನುವವರೇ ಹೆಚ್ಚು
ತುಂಬಿದ ಹೃದಯ ನಿನ್ನದು 
ಕಡಲಿಗೆ ನೀರಿನ ಬಾಯಾರಿಕೆಯೆನ್ನಲು ಸೋಜಿಗ 
ಅಷ್ಟೈಶ್ವರ್ಯ ನಿನ್ನದಾಗಲೆಂದು ಬೇಡಲೇ?
ಲೋಕದೊಳಡಗಿರುವ ಸಕಲ ಸುಖ ಸಂತೋಷ ನಿನ್ನದಾಗಲೆಂದು ಬೇಡಲೇ?
ಅರಸುತಿಹ ನೂರು ವೈಭೋಗಗಳು ನಿನ್ನದಾಗಲೆಂದು ಬೇಡಲೇ?
ಶಯನದೊಳು  ಬಿಡದೆ ಕಾಡುವ ಅತಿಶಯದ ಕನಸುಗಳು ನನಸಾಗಲೆಂದು ಬೇಡಲೇ?
ಬಡತನದಲಿ ಬೇಯುವವರ ಹಸಿವು ನೀಗಿಸುವ ಧಣಿ ನೀನಾಗಲೆಂದು ಬೇಡಲೇ?
ನೋವಿನಲೇ ಜೀವನ ದೂಡುವವರ ಆಶಾಕಿರಣ ನೀನಾಗಲೆಂದು ಬೇಡಲೇ?
ಬಯಸಿಹ ಹೃದಯಕ್ಕೆ ಸಾಂತ್ವನ ನೀಡುವ ಮಮತೆಯ ಕರುಣಾಳು ನೀನಾಗಲೆಂದು ಬೇಡಲೇ?
ಕಣ್ಣೀರಲ್ಲೇ ಕೈತೊಳೆಯುವವರ ಕೈ ಹಿಡಿದು ನಡೆಸುವ ಕರುಣೆಯ ಕಡಲಾಗೆಂದು ಬೇಡಲೇ?
ಏನ ಬೇಡಲಿ ಹೇಳು ಗೆಳೆಯ ಆ ದೇವನ ಬಳಿ.

ಅಶಾಕಿರಣ ನೀನೇ......

ಅಗೋ ನೋಡಲ್ಲಿ ಮಿಂಚೊಂದು ಮೂಡಿದೆ 
ಹೊಸ ಆಶಾಕಿರಣದ ಚೈತನ್ಯ ಹೊಮ್ಮಿದೆ
ದುಡಿವ ದೇಹ,ಸುಖವಿಲ್ಲದ ಮನ ದುಡಿಮೆ ಅನವರತ
ಸದಾ ತದೇಕ ಚಿತ್ತ ಮಾತೃಭೂಮಿಯ ಸೇವಾನಿರತ
ಕಣ್ಣೀರ ಒರೆಸುವರಿಲ್ಲ
ಕನಸ ಕಾಣುವ ಸೌಭಾಗ್ಯವಿಲ್ಲ
ದಣಿದ ದೇಹಕ್ಕೆ ತಂಪಾದ ನಿದ್ದೆಯಿಲ್ಲ
ನೀನೇ ದಿಕ್ಕು,ನೀನೇ ದೆಸೆ
ನಿನ್ನ ಪ್ರಾಣದ ಬೆಲೆ ತಿಳಿದವರಾರೂ ಇಲ್ಲಿಲ್ಲ
ನೀನಲ್ಲದೆ ನಮಗಾರೂ ಇಲ್ಲ
ನಿನ್ನ ಉಸಿರೇ ನಮ್ಮ ಪ್ರಾಣವಾಯು
ನಮ್ಮೆಲ್ಲರ ಚೈತನ್ಯದ ಅಶಾಕಿರಣ ನೀನೇ......

ಚಪ್ಪಲಿಗಳೆಷ್ಟೋ?

ಹಲವು ವರ್ಷಗಳ ಹಾದಿ , ಸವೆದ ಚಪ್ಪಲಿಗಳೆಷ್ಟೋ?
ಇದು ಕೊನೆ,ಇದು ಆರಂಭ ಮುಗಿಯದ ಹಾದಿ
ನೋವು,ನಲಿವು ತೀರದ ಬಯಕೆಯ ಹೆದ್ದಾರಿ
ಬೇಸರಿಕೆ ಇಲ್ಲದ ಹೊಸ ಬೆಳಕಿನ ಹುಡುಕಾಟ ಪ್ರತಿದಿನ
ಅನುಭವಿಸುವ ಪಾರಮಾರ್ಥಿಕ ಸತ್ಯದ ದಾರಿಯ ಹುಡುಕಾಟ ನಿರಂತರ
ಹೊಸ ಹೊಳಹು ಚಿಂತನೆಗೆ ಹಚ್ಚುವ ಕ್ರಿಯಾಶೀಲತೆಯ ಮನಸ್ಸಿನ ತವಕ
ನಡೆವ ಹಾದಿಯಲ್ಲಿ ಮುಳ್ಳು ಕಲ್ಲುಗಳಿರಬೇಕು
ನೋವಿಲ್ಲದ ಸುಖ,ನಲಿವು ನಮಗೆ  ಏಕೆ ಬೇಕು?
ಜೀವನ ಪಾಠ ಕಲಿಯಲಾಗದ ವಿದ್ಯೆ ಏಕೆ ಬೇಕು?
ಗೆಳೆಯರಿಲ್ಲದ ಜೀವನ ಬೇಡವೆ ಬೇಡ
ಸಾಗಬೇಕಾದ ಹಾದಿ ಮತ್ತಷ್ಟು,ಸವೆಯಬೇಕಾದ ಚಪ್ಪಲಿಗಳೆಷ್ಟೋ?

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...