Thursday, November 12, 2015

ಸೌಂದರ್ಯ

ಯಾರು ತುಂಬಿದರು ನಿನ್ನಲ್ಲಿ ಸೌಂದರ್ಯ?
ಎಷ್ಟುದಿನ ಇರುವುದೋ ಈ ಚೆಲುವು?
ಕಾಲನ ಆಂತರ್ಯ ಬಲ್ಲವರು ಯಾರು?
ಇಂದು ರೂಪವಂತ,ನಾಳೆ ಕುರೂಪಿ?
ಇಂದು ರೂಪಕ್ಕೆ ಮರುಳಾದವರು
ನಾಳೆ ಏನಾಗುತ್ತಾರೆ? ಅಂಜುವರೋ? ಮರುಗುವರೋ?
ಒಂದಂತು ಸತ್ಯ,ಬಾಹ್ಯ ಸೌಂದರ್ಯ ಶಾಶ್ವತವಲ್ಲ
ಆದರೂ ರೂಪದ ಭ್ರಮೆ ನಮ್ಮನ್ನು ಏಕೆ ಆವರಿಸುವುದು?
ಯಾವುದು ಸತ್ಯ,ಸುಂದರ ,ಶಿವನೋ ಅವು ಕಣ್ಣಿಗೆ ಕಾಣದು,
ಒಳಗಣ್ಣ ತೆರೆಯಬೇಕು ಸೌಂದರ್ಯವ ಆಸ್ವಾಧಿಸಲು ,
ಭ್ರಮೆಯ ಲೋಕ ಗೋಚರಿಸದು ಕಣ್ಣಿಗೆ
ಸಾಧನೆಯ ಬಲ ಬೇಕು ಅರಿಯಲು
ತಾಳ್ಮೆಬೇಕು ಸಾಧಿಸಲು ಓ ಸತ್ಯವೇ ಬಾ,
ಓ ಸೌಂದರ್ಯವೇ ಬಾ,ಓ ಶಿವನೇ ಬಾ 
ಮನದ ತಿಮಿರವ ನುಂಗಿ ಬೆಳಕ ತಾ//

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...