Tuesday, October 20, 2015

ಹಠಯೋಗಿ

ಮನದಲೆಲ್ಲಾ ಸೂತಕದ ಛಾಯೆ
ತಲೆಬೇನೆ,ಆತಂಕದ ಕರಿಛಾಯೆ
ಬೇಡಬೇಡವೆಂದರೂ ಸುಳಿಯುವ ಮಾಯೆ
ಆಸೆ,ಕಪಟ ನಾಟಕವಾಡಿ ಗಹಗಹಿಸಿದೆ
ನೀ ಬಿಟ್ಟರೂ ನಾ ಬಿಡನೆಂಬ ಹಠಯೋಗಿ
ಆಹುತಿಯೋ,ಬಲಿಪಶುವೇ ಬೇಕೆಂಬ ಹಠ
ಸಿದ್ಧ ವಾಗೆ ನಿಂತಿದೆ ಈಗಲೇ ಬೇಕೆಂದು
ತಲೆಯೊಡ್ಡಲೋ,ಸಿಡಿದೇಳಲೋ
ದ್ವಂದ್ವ ಕದನ ಮನದಲ್ಲಿ ಸಂಚು ಹೂಡಿದೆ
ಯಾವುದು ಸರಿ?ಯಾವುದು ತಪ್ಪು?
ವಿವೇಕ ನರಳುತ್ತದೆ ಅಂಧಕಾರದಲ್ಲಿ 
ಆತಂಕ ಮನದಲ್ಲಿ ಸೋತುಬಿಟ್ಟರೆ?
ಗುರುವೇ ನಿನ್ನ ಕರುಣೆಯ ಬಲನೀಡು
ಎಲ್ಲಾ ದ್ವಂದ್ವಗಳ ಕಟ್ಟಿ ತಿಮಿರವ ಗೆಲ್ಲುವೆ

No comments:

Post a Comment

ಮೌನ ನೃತ್ಯ

ಎತ್ತ ಹೋದರೂ ಮತ್ತೆ ಮತ್ತೆ ಆವರಿಸುತ್ತಿದೆ ; ಬೇಡ ಬೇಡವೆಂದರೂ ಪ್ರೀತಿಯಿಂದಲೇ ಬಳಸುತ್ತಿದೆ ; ಕಣ್ಣ ತೆರೆದರೂ ಅದೇ ! ಕಣ್ಣು ಮುಚ್ಚಿದರೂ ಅದೇ ! ರು...