Tuesday, March 17, 2015

ಏಕೆ ಮರುಳಾದೆ ರಾಧೆ?

ಏಕೆ ಮರುಳಾದೆ ರಾಧೆ?
ಶಾಮನ ನೋಟಕೆ;
ಮಾತಿನ ಮೋಡಿಗೆ
ಏಕೆ ಕಳೆದು ಹೋದೆ?

ಹುಣ್ಣಿಮೆಯ ಚಂದ್ರಿಕೆಯ ಸೊಬಗು
ಕರಿಮೊಗದ ಶಾಮಗೆ ಆಯಿತೇ ಬೆರಗು!
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಆವ ಪುರುಷಗೂ ಒಲಿಯದ ಮನ
ಗೋಕುಲ ನಂದನನ ಬಯಸಿತೇಕೆ ಮನ!
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಪ್ರೀತಿಗೆ ಅನ್ವರ್ಥ ನೀನು
ಕಂಡೆ ಶಾಮನಲ್ಲಿ ಒಲುಮೆ ಜೇನು
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

ಆವ ಜನುಮದ ಬಯಕೆಯೋ?
ಶಾಮನೇ ಇನಿಯನಾಗುವ ಒರತೆಯೋ?
ಏಕೆ ಮರುಳಾದೆ ರಾಧೆ?
ಏಕೆ ಕಳೆದು ಹೋದೆ?

No comments:

Post a Comment

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...