ಮನವ ಮುರಿಯ ಬೇಡ .....

ಒಮ್ಮೆಯಾದರೂ ನಗುತ್ತಾ ಮಾತನಾಡು ಸಿಡುಕದೆ,
ದಿನವೂ ನಿನ್ನ ಹರಳೆಣ್ಣೆ ಮುಖವ ನೋಡಿ,ನೋಡಿ
ಮನಸ್ಸು ರೋಸಿ ಹೋಗಿದೆ.....

ಒಮ್ಮೆ ಕೂಡ ನೀನು ನಮ್ಮನ್ನು ಹೊಗಳುವುದು ಬೇಡ
ಆದರೆ ಮನಸ್ಸು ಅರ್ಥಮಾಡಿಕೊಳ್ಳುವ ಮನಸ್ಸು ನಿನಗಿಲ್ಲವೇ?

ಇಂದು ನೀನು ಹೊಗಳಿದರೂ
ನಮಗದು ಬೈಗಳಂತೆಯೇ ತೋರುತ್ತಿದೆ
ಮಾತೊಂದಿದೆ

"ಹೃದಯಕ್ಕೆ ಸ್ಪಂದಿಸು,
ಜನರು ಮೊದಲು"

ಆದರೆ ನಿನ್ನ ನಡುವಳಿಕೆ

"ಹೃದಯ ಕತ್ತರಿಸು,
ಜನರು ನಿನ್ನ ಕಾಲ ಕಸ"
ಎಂಬಂತಿದೆ.

ಬೇಡ,ಬೇಡ
ಈ ದುರಹಂಕಾರ.
ಬದಲಿಸಿಕೋ ನಿನ್ನ ನಡತೆ...
ಮನವ ಮುರಿಯ ಬೇಡ
ಈ ಹೃದ್ಯ ಪರಿಸರವ ಹಾಳುಮಾಡಬೇಡ||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...