Wednesday, September 19, 2012

ಹಬ್ಬಗಳೂ ಬರಲಿ,ಮನವು ಬಾಡದಿರಲಿ.........


ಅದೇ ಶುಭಾಷಯಗಳು
ಅದೇ ಹಾಡು, ಅದೇ ರಾಗ;
ಹಬ್ಬಗಳು ಒಂದಾದ ಮೇಲೆ ಒಂದು ದಾಳಿಯಿಡುತ್ತಿವೆ;
ಶ್ರಾವಣ ಬಂದನೆಂದರೆ
ಹಬ್ಬಗಳಿಗೆ ಮುನ್ನುಡಿಯಿಟ್ಟಂತೆ;
ಆಷಾಡ ಅಮಾವಾಸ್ಯೆಯಿಂದಲೇ
ಮನ-ಮನಗಳಲ್ಲಿ ಹಬ್ಬಗಳ ಸಾಲುಸಾಲು;
ಏರಿದ ಬೆಲೆಗಳ ನಾಡಲ್ಲಿ
ಎಲ್ಲವೂ ಕಷ್ಟವೇ!
ನಾಡಿನ ದೊರೆಗಳು ಮಾತ್ರ
ನೆಮ್ಮದಿಯ ಉಸಿರುಬಿಡುತ್ತಾರೆ
ಏಕೆಂದರೆ ಅವರ ಖರ್ಚು-ವೆಚ್ಚಗಳನ್ನು
ಭರಿಸುವವ ಜನ ಸಾಮಾನ್ಯನೇ!
ಅವರಿಗೆ ಎಲ್ಲವೂ ಉಚಿತ
ಜೊತೆಗೆ ಮಾಮೂಲು ಪ್ರತಿಯೊಂದು ಯೋಜನೆ ಜಾರಿಗೊಳಿಸಿದಾಗಲೆಲ್ಲಾ.....
ತಲೆತಲಾಂತರಗಳಿಗೆ ಇವರೇ ಕೂಡಿಡುತ್ತಾರೆ
ಬಡವರ ಕಣ್ಣೀರಿನ ,ಬೆವರಿನ ಹನಿಯಿಂದ
ಸಾಯುವವನು ಸಾಯುತ್ತಲ್ಲೇ ಇದ್ದಾನೆ
ಮಜ ಉಡಾಯಿಸುವವ ಉಡಾಯಿಸುತ್ತಲೇ ಇದ್ದಾನೆ
ಎಲ್ಲವೂ ಅಯೋಮಯ
ನಾವು ಮಾತ್ರ ಎಲ್ಲವನ್ನೂ ಮರೆಯುತ್ತೇವೆ
ಹಬ್ಬಗಳು ಬಂತೆಂದರೆ ಖುಷಿ
ತೂತಾದ ಜೋಬಿಗೆ ಮತ್ತೊಂದು ತೂತು ಬಿದ್ದರೆ ವ್ಯತ್ಯಾಸ ಏನೂ ಇರದು
ಖಾಲಿಯಾಗಲಿ ಬಿಡಿ;
ನಾಳೆ ನಮಗಾಗಿಯೇ ಇದೆ;
ಮೈಯಲ್ಲಿ ಶಕ್ತಿ ಇದೆ;
ಸಾವು ಬರುವವರೆಗೂ ದುಡಿಯುವ ತವಕವಿದೆ
ಮನಸು ಮಾತ್ರ ಮುರುಟದಿರಲಿ
ಎಂಬುದೇ ನಮ್ಮೆಲ್ಲರ ಪ್ರಾರ್ಥನೆ;
ಹಬ್ಬಗಳೂ ಬರಲಿ
ಮನವು ಬಾಡದಿರಲಿ.........

Wednesday, September 12, 2012

ಬಣ್ಣ


ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು;
ಬೆಳೆದು ದೊಡ್ಡವನಾದಾಗ ಕಪ್ಪು;
ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು;
ನಾನು ಆತಂಕದಲ್ಲಿದ್ದಾಗ ಕಪ್ಪು;
ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು;
ನಾನು ಸತ್ತಾಗಲೂ ನನ್ನ ಬಣ್ಣ ಕಪ್ಪು;
ನಾನು ಯಾವಾಗಲೂ ಕಪ್ಪು;

ನನ್ನ ಬಿಳಿಯ ಗೆಳೆಯರೇ!
ನೀವು ಹುಟ್ಟಿದಾಗ ನಿಮ್ಮ ಬಣ್ಣ ಗುಲಾಬಿ;
ನೀವು ಬೆಳೆದು ನಿಂತಾಗ ನಿಮ್ಮ ಬಣ್ಣ ಬಿಳಿ;
ನೀವು ಸೂರ್ಯನಿಗೆ ಮೈಯ್ಯೊಡ್ಡಿದಾಗ ಕೆಂಪು;
ತಣ್ಣನೆಯ ಸಮಯದಲ್ಲಿ ನೀಲಿ;
ಗಾಬರಿಯಾದಾಗ ಹಳದಿ;
ಅನಾರೋಗ್ಯದಿಂದಾಗಿ ನರಳುವಾಗ ಹಸಿರು;
ಸತ್ತಾಗ ಕಂದು;
 ಆದರೂ ನನ್ನನ್ನು ಕಂಡಾಗ ಬಣ್ಣದವನು ಎನ್ನುತ್ತೀರಿ!


ಈ ಕವಿತೆ, ಬರೆದಿದ್ದು ಆಫ್ರೀಕಾದ ಮಗು. ೨೦೦೫ ರ ಅತ್ಯುತ್ತಮ ಕವಿತೆ ಎಂದು ಹೆಸರುಮಾಡಿದೆ.
ಚಿತ್ರಕೃಪೆ: Facebook.

ನಾನು ಅರಿತೆ



ನಾನು ಅರಿತೆ,
ನಾನು ಏಕಾಂಗಿಯಾಗಿಯೇ ಬಂದೆ ಹಾಗು ಏಕಾಂಗಿಯಾಗಿಯೇ ಹೋಗಬೇಕು.

ನಾನು ಅರಿತೆ,
ಕೆಲವೇ ಕೆಲವರು ನಿನ್ನ ಜೊತೆ ಇರುತ್ತಾರೆ,
ನಿನ್ನ ಅವಶ್ಯಕತೆ ಇರುವಾಗ ಮಾತ್ರ,ಇಲ್ಲವಾದಲ್ಲಿ ಇಲ್ಲ.

ನಾನು ಅರಿತೆ,
ಯಾರಿಗಾಗಿ ನೀನು ತುಂಬಾ ಪರಿತಪಿಸಿ ಕಾಳಜಿವಹಿಸುವೆಯೋ
ಅವರೇ ನಿನಗೆ ತುಂಬಾ ನೋವು ಕೊಡುವರು ಹಾಗು ನಿನ್ನನ್ನು ಬೈಯುವರು.

ಅಂತಿಮವಾಗಿ
ನಾನು ಅರಿತೆ,
ಪ್ರೀತಿಸು ಕೆಲವರನ್ನು ಆದರೆ  ಮರೆಯದೆ
ಸ್ವಲ್ಪ ಪ್ರೀತಿ ನಿನಗಾಗಿ ಉಳಿಸಿಕೋ.


ಚಿತ್ರ ಕೃಪೆ: Facebook.

Friday, September 7, 2012

ತಪ್ಪು-ಒಪ್ಪು


ಎಂತಹ ದಿನಗಳನ್ನು ದೂಡಿದ್ದೇವೆ
ಎಲ್ಲಾ ಕಾಲವನ್ನೂ ಹಾಳುಮಾಡಿದ್ದೇವೆ
ಕೊರಗಿ ಕೊರಗಿ ಕಾಲ ಕಳೆಯುತ್ತಿದ್ದೇವೆ
ತಲೆಯಲ್ಲಿ ಬರೀ ಯೋಚನೆಗಳು
ಕಳೆದ ದಿನಗಳದ್ದು..
ಕಳೆದ ಸಿಹಿ-ಕಹಿ ದಿನಗಳದ್ದು..
ಮುಂದೆ ಪ್ರಶ್ನೆ ಇದೆ.
ಕೊರಗು ಇದೆ.
ನಾವು ಕೊರಗುತ್ತಲೇ ಇದ್ದೇವೆ
ಕೈಗೆ ಬರುವ ಹಣ ಕ್ಷಣದಲ್ಲೇ ಮಾಯವಾಗುದ ಕಂಡು ಕಂಗಾಲಾಗಿದ್ದೇವೆ.
ಏರುವ ಬೆಲೆಗಳ ಕಂಡು ಹೈರಾಣಾಗಿದ್ದೇವೆ
ನಮ್ಮನ್ನು ಆಳುವವರು ಮಾತ್ರ ಕೊಳ್ಳೆ ಹೊಡೆಯುತ್ತಲೇ ಇದ್ದಾರೆ
ನಮ್ಮ ಹಣವನ್ನೆಲ್ಲಾ ದೋಚುವುದ ಕಂಡೂ ಸುಮ್ಮನಿದ್ದೇವೆ
ಮೈಮೇಲೆ ಬೆಲೆಗಳ ರಾಶಿ-ರಾಶಿ ಹೇರಿಸಿಕೊಳ್ಳುತ್ತಿದ್ದೇವೆ
ನಾವು ಮಾತ್ರ ಬೆರಗಾಗಿದ್ದೇವೆ,ಚಕಿತರಾಗಿದ್ದೇವೆ ಏನೂ ಮಾಡಲಾಗದೆ
ನಮ್ಮ ಕೈಯಲ್ಲಿ ಏನಾಗುತ್ತೆ?
ಐದು ವರ್ಷಕ್ಕೊಮ್ಮೆ ಮತ್ತೆ ಮತ್ತೆ ಎಡವುತ್ತೇವೆ
ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಿ ಮೊರ್ಖರಾಗಿದ್ದೇವೆ
ದಾರಿಕಾಣದೆ ಬೇಸತ್ತಿದ್ದೇವೆ
ಹಿಡಿಶಾಪವನ್ನಲ್ಲದೆ ಇನ್ನು ಏನನ್ನೂ ಮಾಡಲಾಗದ ಅಸಹಾಯರಾಗಿದ್ದೇವೆ
ಗುಲಾಮರಾಗಿದ್ದೇವೆ.

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...