ಮನವ ಎಚ್ಚರಿಸಲು ಘಂಟೆ, ಜಾಗಟೆಗಳು ಬೇಕೇ?
ಲೋಕ ಬೆಳಗಾಗಲು ಕೋಳಿ ಕೂಗಲೇ ಬೇಕೇ?
ಭವಿಗಳು ಆಚರಿಸುವ ಡಂಭಗಳ ನೀನೇ ನೋಡುತ್ತಿರುವೆ
ದೇವ ನಿನ್ನ ಎಚ್ಚರಿಸಲು ಶಂಖ,ಘಂಟೆ,ಜಾಗಟೆಗಳು ಬೇಕೇ?
ಜ್ಯ್ನಾನದ ದೀಪ ಮನದಲ್ಲಿ ಬೆಳಗಲು ನೀ ಬಾರೆಯಾ?
ಭಕ್ತಿಯ ,ಪ್ರೀತಿಯ ಕೂಗಿಗೆ ನೀ ಓಗೋಡೆಯಾ ತಂದೆ?
Thursday, September 29, 2011
Wednesday, September 28, 2011
ಲಾಲಸೆ
ನೀನೇ ಮನದಲ್ಲಿ ನಿಲ್ಲು
ನಿನಗಲ್ಲದೇ ಇಲ್ಲಿ ಬೇರೆಯವರಿಗೆ ಜಾಗವಿಲ್ಲಿಲ್ಲ
ನಿನ್ನನ್ನೇ ನಂಬಿಹೆನು ಇಲ್ಲಿ ಅನವರತ
ನೂರಾರು ಕನಸುಗಳ ಹೊತ್ತು ಭಿನ್ನತೆಯ ರಾಗದಲ್ಲಿ\\
ಯಾವ ಭಾವವೋ! ಯಾವ ತಾಳವೋ?
ಒಂದೂ ಅರಿಯದೆ ನಿನ್ನದೇ ಧ್ಯಾನದಲ್ಲಿಹೆನು
ಕರುಣೆಯ ದಾರಿ ತೋರದೆ,ನಸುನಗುತ್ತಾ ಕುಳಿತು
ಎಲ್ಲವನ್ನೂ ತಿಳಿದೂ ತಿಳಿಯದಂತೆ ಈ ಮೌನವೇಕೋ ತಿಳಿಯೆ\\
ನಿಮ್ಮ ತ್ಯಾಗ, ನಮ್ಮ ಭೋಗ ಲಾಲಸೆಗೆ ಈ ಪ್ರಾರ್ಥನೆ
ಎಷ್ಟು ಸಮಂಜಸವೋ! ನಾ ತಿಳಿಯೆ
ಪ್ರಾರ್ಥನೆಯಂತೂ ನಿಲ್ಲದೇ ಸಾಗಿದೆ
ನಿನ್ನ ಸೆಳೆಯುವ ಯತ್ನವೂ ಮುಂದುವರೆದಿದೆ\\
ನಿನಗಲ್ಲದೇ ಇಲ್ಲಿ ಬೇರೆಯವರಿಗೆ ಜಾಗವಿಲ್ಲಿಲ್ಲ
ನಿನ್ನನ್ನೇ ನಂಬಿಹೆನು ಇಲ್ಲಿ ಅನವರತ
ನೂರಾರು ಕನಸುಗಳ ಹೊತ್ತು ಭಿನ್ನತೆಯ ರಾಗದಲ್ಲಿ\\
ಯಾವ ಭಾವವೋ! ಯಾವ ತಾಳವೋ?
ಒಂದೂ ಅರಿಯದೆ ನಿನ್ನದೇ ಧ್ಯಾನದಲ್ಲಿಹೆನು
ಕರುಣೆಯ ದಾರಿ ತೋರದೆ,ನಸುನಗುತ್ತಾ ಕುಳಿತು
ಎಲ್ಲವನ್ನೂ ತಿಳಿದೂ ತಿಳಿಯದಂತೆ ಈ ಮೌನವೇಕೋ ತಿಳಿಯೆ\\
ನಿಮ್ಮ ತ್ಯಾಗ, ನಮ್ಮ ಭೋಗ ಲಾಲಸೆಗೆ ಈ ಪ್ರಾರ್ಥನೆ
ಎಷ್ಟು ಸಮಂಜಸವೋ! ನಾ ತಿಳಿಯೆ
ಪ್ರಾರ್ಥನೆಯಂತೂ ನಿಲ್ಲದೇ ಸಾಗಿದೆ
ನಿನ್ನ ಸೆಳೆಯುವ ಯತ್ನವೂ ಮುಂದುವರೆದಿದೆ\\
Friday, September 23, 2011
ತುಳಿತ
ಅವನು ಬೆಳೆಯುತ್ತಲೇ ಇದ್ದಾನೆ;
ನನ್ನನ್ನು, ನನ್ನ ಗೆಳೆಯರೆಲ್ಲರನ್ನೂ ತುಳಿದು;
ತುಳಿದು ತುಳಿದು ಬಸವಳಿಯದೆ ಮೇಲೇರುತ್ತಿದ್ದಾನೆ;
ನಮಗೋ ಏಳಲಾಗದೆ
ಕೊರಗಿ ಕೊರಗಿ ಹಿಡಿ ಶಾಪಹಾಕ್ಕುತ್ತಾ
ನಮ್ಮ ಸಮಯಕ್ಕೆ ಕಾಯುತ್ತಿದ್ದೇವೆ;
ಒಂದೋ ಅವನು ಇಲ್ಲವಾಗಬೇಕು;
ಇಲ್ಲ ನಾವುಗಳು ಬದಲಿಸಬೇಕು ಅವನ ದಾರಿಯಿಂದ;
ಯಾವುದು ಸುಲಭವೋ ತಿಳಿಯೆವು?
ಬೆನ್ನು, ಕೈಕಾಲುಗಳು ನಿತ್ರಾಣವಾಗಿದೆ;
ನಾಳೆ ಏನು? ಎಂಬ ಪ್ರಶ್ನೆ
ಉತ್ತರವಿಲ್ಲದೆ ಸೊರಗಿದೆ;
ಎಲ್ಲೆಡೆಯಲ್ಲೂ ಕತ್ತಲು ಕವಿದಿದೆ;
ನಾಳೆಗೆ ನಾನು,ನಾವು ಕಾದಿದ್ದೇವೆ;
ಹೊಸತನಕ್ಕೆ, ಹೊಸತಾಗಿ ತುಳಿತವನ್ನು ಅನುಭವಿಸಲು\\
ನನ್ನನ್ನು, ನನ್ನ ಗೆಳೆಯರೆಲ್ಲರನ್ನೂ ತುಳಿದು;
ತುಳಿದು ತುಳಿದು ಬಸವಳಿಯದೆ ಮೇಲೇರುತ್ತಿದ್ದಾನೆ;
ನಮಗೋ ಏಳಲಾಗದೆ
ಕೊರಗಿ ಕೊರಗಿ ಹಿಡಿ ಶಾಪಹಾಕ್ಕುತ್ತಾ
ನಮ್ಮ ಸಮಯಕ್ಕೆ ಕಾಯುತ್ತಿದ್ದೇವೆ;
ಒಂದೋ ಅವನು ಇಲ್ಲವಾಗಬೇಕು;
ಇಲ್ಲ ನಾವುಗಳು ಬದಲಿಸಬೇಕು ಅವನ ದಾರಿಯಿಂದ;
ಯಾವುದು ಸುಲಭವೋ ತಿಳಿಯೆವು?
ಬೆನ್ನು, ಕೈಕಾಲುಗಳು ನಿತ್ರಾಣವಾಗಿದೆ;
ನಾಳೆ ಏನು? ಎಂಬ ಪ್ರಶ್ನೆ
ಉತ್ತರವಿಲ್ಲದೆ ಸೊರಗಿದೆ;
ಎಲ್ಲೆಡೆಯಲ್ಲೂ ಕತ್ತಲು ಕವಿದಿದೆ;
ನಾಳೆಗೆ ನಾನು,ನಾವು ಕಾದಿದ್ದೇವೆ;
ಹೊಸತನಕ್ಕೆ, ಹೊಸತಾಗಿ ತುಳಿತವನ್ನು ಅನುಭವಿಸಲು\\
Subscribe to:
Posts (Atom)
ಸಂತೋಷದ ಋಣ
ನೀ ಯಾರಾದರೇನು ? ನಿನ್ನಲ್ಲಿ ಏನಿದ್ದರೇನು ? ಮನದೊಳ ಭಾವಗುಣದಂತೆ , ದಕ್ಕುವುದು ನಿನಗೆ ಸಂತೋಷದ ಋಣ . ಮನದ ರಂಗಮಂಚದಲಿ ನಡೆದಿದೆ ತಾಲೀಮು , ...
-
ದೀಪ ಜ್ಯೋತಿಯೇ ಪರಂ ಬ್ರಹ್ಮ ದೀಪಜ್ಯೋತಿಯೇ ಜನಾರ್ಧನ ದೀಪವೇ ಮನದ ಚೈತನ್ಯವು ಜೀವನ ಬೆಳಗುವ ದೀಪವೇ ನಿನಗೆ ನಮನ|| ಮನವ ಅರಳಿಸುವ ಆತ್ಮಜ್ಯೋತಿಯೇ ಅಂಧಕಾರವ ಕಳೆಯುವ ...
-
ಯಾರ ಸ್ಪರ್ಶಕೆ ಈ ಮಲ್ಲಿಗೆ ನಗುವಂತಾಗಿದೆ ಈ ಮೊಗ್ಗಿನ ಸೌಂದರ್ಯ ಹಿಗ್ಗುವಂತಾಗಿದೆ ಯಾರ ಸ್ಪರ್ಶಕ್ಕೆ ಈ ಹೂವು ಮನಸೋತಿತೋ ಯಾರು ಕಾರಣರು ಇದಕ್ಕೆಲ್ಲಾ? ಹುಣ್ಣಿಮೆಯ ರಾ...
-
ಎತ್ತ ಸಾಗಿದೆ ನಮ್ಮ ಪಯಣ? ಗುರಿ ಇದ್ದೇ ಸಾಗುವ ಪಯಣ ಕಠಿಣ ಗುರಿ ಇರದ ಪಯಣ ಪ್ರಾಣಿಗಳ ಜೀವನ ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!