Tuesday, January 25, 2011

|| ಜ್ಣಾನದ ತೀರ||

ಬದುಕು ಬಾರವಾಗಬಾರದು
ಬಾಳಬಂಡಿಯ ಚಕ್ರ ಮುರಿಯಬಾರದು\
ಬದುಕು ಸಾಗಲಿ
ಕಾಲಚಕ್ರ ಉರುಳಲಿ\\

ಮತ್ತೆ ವಸಂತ ಬರುವ
ಪ್ರಕೃತಿಯಲಿ ಚೈತನ್ಯ ತುಂಬುವ\
ಮರಳಿ ತಂದ ಜೀವಕೆ ಹರುಷ
ನಮಗಂದೇ ಹೊಸ ವರುಷ\\

ಮುಪ್ಪು ನಮಗೆ
ಎಲ್ಲಿಂದಲೋ ಬಂದವರು ಇಲ್ಲಿಗೆ\
ನೂರು ದಾರಿ ಹರಿವ ನೀರು
ಸೇರುವ ಗುರಿ ಒಂದೇ\\

ನಾವು-ನೀವು ಭೇದ ಹೆಚ್ಚು
ನಮ್ಮ ನಿಲುವು ದೇವರಿಗೇ ಮೆಚ್ಚು\
ಅರಿವು ಮಾತ್ರ ದೂರ
ಎಂದು ಸೇರುವೆವೋ ಜ್ಣಾನದ ತೀರ\\

Friday, January 21, 2011

||ಗುರು||

ಲೋಕದೊಳು ಬಹುಮಂದಿ
ಜೀವನದಲಿ ಬೆಂದು
ಹದವಾಗಿ ಬೆಳೆದು
ಮಿತವಾಗಿ ಮಣಿದು
ಶ್ರೀವಾಣಿ ಸಂಗದಲಿ ಬಲುಬಂಧಿ

ನಿತ್ಯವೂ ಸಾಧನೆಯ ತಪವು
ಚೈತನ್ಯದ ಒಲವು
ಬರಲೆಮಗೆ ಎದುರಿಸುವ ಬಲವು
ಸಾಧಿಸುವ ಛಲವು
ದಾರಿತೋರು ಜಗದೊಳಗೆ ಪರಮ ಗುರುವೇ

ಬಾಳಿನಲಿ ಜ್ಜಾನ ಜ್ಯೋತಿಯ ಹಚ್ಚಿ
ಯೋಗ ಜ್ಜಾನದ ರೆಕ್ಕೆಯ ಬಿಚ್ಚಿ
ಕನಿಕರಿಸು ಕಾರುಣ್ಯವಾ ಚುಚ್ಚಿ
ಕ್ರಾಂತಿಯ ಕಹಳೆಯ ಊದು ಬಾ ಸಚ್ಚಿ-
ದಾನಂದ ಸ್ವರೂಪನೇ ಎಚ್ಚ-
ರಿಸು ಬಾ ಪರಮ ಗುರುವೇ

ಹುಟ್ಟಿದಾ ಜೀವ
ಎತ್ತ ಹೋಗದು ಇಲ್ಲಿ
ಬೆಳೆಬೆಳೆದು ಏರುವುದು ದಿಗಂತಕ್ಕೆ
ನಿಮ್ಮ ಯೋಗದಾ ಫಲವ
ಜೀವದಾ ಮೇಲಿಟ್ಟು ಹರಸಿ
ಜೀವನವ ಉದ್ಧರಿಸೋ ಪರಮಗುರುವೇ

ಈ ಸಾವು ನ್ಯಾಯವೇ?

ಈ ಸಾವು ನ್ಯಾಯವೇ ?, ಈ ಸಾವು ನ್ಯಾಯವೇ ? ನಮ್ಮಭಿಮಾನಕ್ಕೆ ಹದಿನೆಂಟರ ಹರೆಯವಂತೆ; ಹಪಹಪಿಸಿದೆವು ವಿಜಯಕ್ಕೆ ಬಕ ಪಕ್ಷಿಯಂತೆ ;    ಹದಿನೆಂಟು ವರ್ಷಗಳ ...