ದೇವರ ದುಡ್ಡು

ಕುಕ್ಕೆ ಸುಭ್ರಮಣ್ಯ;
ಶಿರಡಿ
ತಿರುಪತಿ
ಅನಂತ ಪದ್ಮನಾಭ ದೇವಸ್ಥಾನದ
ಬಂಗಾರ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಯೋಚನೆ
ಎಷ್ಟಾದರೂ ದೇವರ ದುಡ್ಡು ,ಸರ್ಕಾರದ ದುಡ್ಡು;

ಇಲ್ಲಿ ಜನಶೇವೆಯೇ ಜನಾರ್ಧನನ ಸೇವೆ
ಜನರ ಸೇವೆ ಮಾಡುವ ಅಗತ್ಯವೇ ಇಲ್ಲ;
ಏಕೆಂದರೆ ದೇವರೇ ಇಲ್ಲವೆಂದುಕೊಂಡಿದ್ದಾರೆ ಸರ್ಕಾರದವರು
ಜನಸೇವೆ ಮಾಡಿದರೂ ಅಷ್ಟೆ, ಬಿಟ್ಟರೂ ಅಷ್ಟೆ
ಎಷ್ಟಾದರೂ ಸರ್ಕಾರಿ ಕೆಲಸ, ದೇವರ ಕೆಲಸ.

ಸಿದ್ಧತೆ

ಎಲ್ಲಕ್ಕೂ ಸಿದ್ಧನಿದ್ದೇನೆ
ಮನಃಪೂರ್ವಕವಾಗಿ ಅನುಭವಿಸಲು
ನನ್ನ ತಪ್ಪುಗಳಿಗೆ
ನನ್ನದಲ್ಲದ ತಪ್ಪುಗಳಿಗೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಮನದ ಭಾವಗಳ ಹೊರಹಾಕಿದ್ದಕ್ಕೆ
ಸತ್ಯದ ನುಡಿಗಳ ಹೇಳಿದ್ದಕ್ಕೆ
ಅಸತ್ಯವನ್ನು ಸತ್ಯವಲ್ಲವೆಂದು ಹೇಳಿದ್ದಕ್ಕೆ
ಪ್ರಾಮಾಣಿಕತೆಯಿಂದ ನಡೆದುಕೊಂಡಿದ್ದಕ್ಕೆ
ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ;

ಏರಿಕೆ

ನಿದ್ದೆಯಿಂದ ಎದ್ದೆ
ಮತ್ತೊಂದು ಹೊಸದಿನವೆಂದು;
ದಿನಪತ್ರಿಕೆಯ ಸುದ್ದಿ
ದಿಗಿಲು ಬರಿಸುವಂತೆ ಇತ್ತು;
ಬಂಗಾರದ ಬೆಲೆ ಅಂತರಿಕ್ಷದ
ಹಾದಿ ಹಿಡಿದಿತ್ತು;
ಡೀಸಲ್,ಪೆಟ್ರೋಲ್,ಗ್ಯಾಸ್
ದಿನ ಬಳಕೆಯ ಬೆಲೆಗಳ ಸಾಲು ಸಾಲು....
ನಾವೇನೂ ಕಡಿಮೆಯಿಲ್ಲವೆನ್ನುತ್ತಿತ್ತು;
ರುಪಾಯಿ ಹ್ಯಾಪ್ ಮೋರೆ ಹಾಕಿತ್ತು
ಗಗನಕ್ಕೇರುವ ಬದಲು
ಪಾತಾಳಕ್ಕಿಳಿಯುತ್ತಿತ್ತು ಡಾಲರ್ ಎದುರು;
ನಮ್ಮ ಆಳುವವರಿಗೆ ಬೆಲೆ ಏರಿಕೆಗೆ
ಮತ್ತೊಂದು ಕಾರಣ ಸಿಕ್ಕಿತ್ತು;

ಹೆಜ್ಜೆ

ಹಿಂತಿರುಗಿ ನೋಡಿದೆ ಮತ್ತೆ ಮತ್ತೆ
ನಡೆದು ಬಂದ ದಾರಿ;
ಪಡೆದ ನೋವು;
ನಗು ನಗುತಾ ಅನುಭವಿಸಿದೆ
ಚುಚ್ಚುಮಾತುಗಳ ಬೆಲೆಕೊಡದೆ ಹೆಜ್ಜೆ ಹೆಜ್ಜೆಗೆ.....

ಈಗಲೂ ಅದೇ ನೋವು
ಪಾತ್ರಗಳು ಮಾತ್ರ ಬದಲಾಗಿದೆಯಷ್ಟೆ
ಅದೇ ಹೆಜ್ಜೆಗಳು;
ಅದೇ ಹೆಜ್ಜೆ ಗುರುತುಗಳು;
ಮಾಸದ ನೆನಪುಗಳು ಹೆಜ್ಜೆ ಹೆಜ್ಜೆಗೆ.....

ನನ್ನ ಕನಸು

  ಕನಸು ಕಾಣಬೇಕು ನನ್ನ ಕನಸು ಕಾಣಬೇಕು ನಾ ಬಾನಲ್ಲಿ ಹಾರಾಡಬೇಕು ಅದಕ್ಕೆ ನನಗೆ ರೆಕ್ಕೆಗಳು ಬೇಕು ಬಾನಲ್ಲಿ ತೇಲಾಡಬೇಕು ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗ...