ಕನ್ನಡಿ


ಪ್ರತಿಮೆಗಳು ಹಲವು;
ಪ್ರತೀಕಗಳು ಹಲವು;
ಒಂದೊಂದು ಬಗೆಬಗೆಯ ಆದರ್ಶಗಳ ಪ್ರತಿಬಿಂಬ;
ಬೆನ್ನೆತ್ತುವವರು ಹಲವರು;
ಕೈಚೆಲ್ಲುವವರು ಹಲವರು;
ಗುರಿಮುಟ್ಟುವವರು ಮಾತ್ರ ಕೆಲವೇ ಕೆಲವರು;
ಸಾರ್ಥಕತೆಯನ್ನರಸಿ ಪರಿತಪಿಸುವವರು ಒಬ್ಬರೋ! ಇಬ್ಬರೋ!
ಸಾಧಕನಿಗಲ್ಲದೆ ಮತ್ಯಾರಿಗೊಲಿವುದು ಗೆಲುವು ಹೇಳಿ!

ಕತ್ತಲು-ಬೆಳಕು


ಕತ್ತಲು-ಬೆಳಕು
ನಾನು ಕತ್ತಲಲ್ಲಿ;
ಅವನು ಬೆಳಕಲ್ಲಿ;
ಕತ್ತಲಲ್ಲಿ ನಾನು ಬೆಳಕ ಕಾಣಬಯಸಿದ್ದೇನೆ;
ಬೆಳಕಲ್ಲಿ ಅವನು ಕತ್ತಲ ಕಾಣುತ್ತಿದ್ದಾನೆ;
ಭ್ರಮೆಯಲ್ಲಿದ್ದೇನೆ ಬೆಳಕಿನಲ್ಲಿ ನಾನಿದ್ದೇನೆಂದು;
ನಗುತ್ತಿದ್ದಾನೆ ಅವನು ಬೆಳಕಿನ ಮಾಯೆಗೆ ಮರುಳಾಗಿ;
ನಾನಂದು ಕೊಂಡಿದ್ದೂ ಸತ್ಯವೋ? ಮಿಥ್ಯವೋ?
ಅವನು ಅಂದುಕೊಂಡಿದ್ದು ಸತ್ಯವೋ? ಮಿಥ್ಯವೋ?
ಭ್ರಮೆಯ ಬದುಕು;
ಮಾಯೆಯ ಸೆಳೆತ;
ಕತ್ತಲಲ್ಲಿ ಬೆಳಕ ಹುಡುಕುವವನು ಅಶಾವಾದಿ;
ಬೆಳಕಲ್ಲಿ ಕತ್ತಲ ಕಾಣುವವನು ನಿರಾಶಾವಾದಿ;

ಕನ್ನಡ ಸಮ್ಮೇಳನ-೨೦೧೩


ಮತ್ತೊಂದು ಕನ್ನಡ ಸಮ್ಮೇಳನ ಸದ್ದಿಲ್ಲದೆ
ಇತಿಹಾಸ ಪುಟಗಳ ಸೇರಿತು ಹೊಸತನವಿಲ್ಲದೆ!
ಮರೆತಾದರೂ ಹೇಗೆ ಮರೆಯೋಣ ಹೇಳಿ
ಜೋತು ಬಿದ್ದಿದ್ದೇವೆ ಯಾರೋ ಹಾಕಿದ ಆಲದ ಮರಕ್ಕೆ!
ಮುಂದೆ ಸಾಗದೆ ಇದ್ದ ಜಾಗದಲ್ಲೇ ನಿಂತು
ಅಡಿ ಇಡಲಾಗದೆ ಮುಂದೆ, ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೇವೆ!
ಸಾಪೇಕ್ಷ ಸಿದ್ಧಾಂತಕ್ಕೆ ಸೋತು;
ಮುಂದೆ ಹೋಗುವವರ ಕಂಡು;
ನಾವು ಮುನ್ನಡೆಯುತ್ತಿದ್ದೇವೆಂಬ ಭ್ರಮೆಯಲ್ಲಿದ್ದೇವೆ!
ತಂತ್ರಾಂಶ,ಸುಧಾರಣೆ,ಹೊಸತನ,ಆವಿಷ್ಕಾರ
ಎಲ್ಲೋ ಕೇಳಿದ ಹೊಸಪದಗಳಂತೆ ತೋರುತ್ತಿವೆ!
ಜಗತ್ತು ಕ್ಷಣಕ್ಷಣಕ್ಕೂ ಬದಲಾಗುತ್ತಿದೆ ನಿರಂತರವಾಗಿ
ಈಗಿನದು ಮುಂದಿನ ಕ್ಷಣದಲ್ಲಿ ಬದಲಾಗಿರುತ್ತದೆ
ಕನ್ನಡ ಭಾಷೆ,ಕನ್ನಡ ಬಳಕೆ ಮಾತ್ರ ಎಂದಿನಂತೆ ಸೊರಗಿದೆ
ಚರ್ಚೆ,ಸವಾಲು,ಆವಿಷ್ಕಾರಗಳು ಕನ್ನಡಕ್ಕೆ ಎಲ್ಲಿಂದ ಬರಬೇಕು?
ಕನ್ನಡ ಸಂಕೀರ್ಣವಾಗಿ,ಕನ್ನಡಿಗರ ಸಂಕುಚಿತತೆಗೆ ಬಲಿಯಾಗಿ ಬೆಳೆಯಲಾರದೆ,ನಿಂತನೀರಾಗಿ
ಬೆಂಗಳೂರಿನ ಕೆರೆಗಳ ಸ್ಥಿತಿ ಕನ್ನಡ ಭಾಷೆಗೆ ಬಂದೊದಗಿದೆ;
ಇರುವ ಶಬ್ದಗಳೇ, ಪದಗಳೇ ಬಳಕೆಯಾಗದೆ ಕಣ್ಮರೆಯಾಗಿತ್ತಿದೆ;
ಕನ್ನಡನಾಡಲ್ಲೇ ಕನ್ನಡಶಾಲೆಗಳು ನೆಲೆಕಳೆದುಕೊಳ್ಳುತ್ತಿವೆ;
ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ನಾವು ಒಳಗಾಗಿದ್ದೇವೆ;
ಆಂಗ್ಲ ಶಾಲೆಗಳು ಕನ್ನಡ ಶಾಲೆಗಳ ನುಂಗುತ್ತಿವೆ;
ನಮ್ಮದೇ ಸಿನಿಕತೆಗೆ;
ಅನ್ಯಭಾಷೆಗಳ ಒತ್ತಡಕ್ಕೆ ಸಿಲುಕಿದೆ ಕನ್ನಡ;
ಕನ್ನಡಿಗರ ಕೈಯಲ್ಲೇ ಅವಮಾನಿಸಲ್ಪಟ್ಟಿದೆ ಕನ್ನಡ;
ಇನ್ನು ಸಾಹಿತಿ,ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಬಲಿಕೊಡುತ್ತಿದ್ದಾರೆ ಕನ್ನಡವನ್ನು;
ವಿಜ್ಯಾನ,ತಂತ್ರಜ್ಯಾನ ಹೊಸಹೊಸ ದಾರಿಗಳು ತೆರೆದಿಕೊಳ್ಳುತ್ತಿದೆ;
ಬೇರೆ ಭಾಷೆಗಳು ಆಕ್ರಮಿಸಿದರೆ,ಕನ್ನಡ ಮಾತ್ರ ನರಳಿದೆ;
ಪ್ರಪಂಚವನ್ನು ಕನ್ನಡದ ಕಂಗಳಿಂದ ನೋಡುವ.ಅರಿವ ಭಾಗ್ಯ ಕನ್ನಡ ಕಂದರಿಗಿಲ್ಲ;
ಆರ ಸೌಭಾಗ್ಯಕ್ಕೋ!,ಆರ ಅನುಕೂಲಕ್ಕೋ?
ಬೆಳಕಿಗೆ ಬಾಗಿಲ ತೆರೆಯದೆ, ಕತ್ತಲಲ್ಲಿದ್ದೇವೆ ಎಂದು ಬೊಬ್ಬೆಹೊಡೆಯುತ್ತಿದ್ದೇವೆ ನಾವು;
ಎಷ್ಟು ಸಮ್ಮೇಳನಗಳು ಮಾಡಿದರೂ....
ಕೋಟಿ ಕೋಟಿ ಹಣವ ಸುರಿದರೂ.....
ನಾವೇ ಹಾಕಿಕೊಂಡ ಬೇಡಿಯ ಕಳಚದಿರೆ ಸ್ವಾತಂತ್ರವೆಂಬುದಿದೆಯೇ?
ಕನ್ನಡ,ಕನ್ನಡ,ಕನ್ನಡ,ಕನ್ನಡ
ಪ್ರಪಂಚಕ್ಕೆ ಸಂವಾದಿಯಾಗಬಲ್ಲುದೇ?

ವಿಷವೃಕ್ಷ


ನನ್ನ ಗೆಳೆಯನ ಬಗ್ಗೆ ಕೋಪಗೊಂಡಿದ್ದೆ,
ಮನಸ್ಸಿಗೆ ಸ್ವಾಂತನ ಹೇಳಿದೆ;
ಕಡುಕೋಪ ಕೊನೆಗೊಂಡಿತು;
ನನ್ನ ಶತೃವಿನ ಬಗ್ಗೆ ಕೋಪಗೊಂಡಿದ್ದೆ,
ಮನಸ್ಸಿಗೆ ಸ್ವಾಂತನ ಹೇಳಿದರೂ
ಕಡುಕೋಪ ಹೆಮ್ಮರವಾಯಿತು;

ಮನದ ತೋಟದಲ್ಲಿ ಭಯಕ್ಕೆ ನೀರಡಿಸಿದೆ
ರಾತ್ರಿ ಮತ್ತು ಹಗಲೆನ್ನದೆ ನನ್ನ ಕಣ್ಣೀರಿನಿಂದ;
ನನ್ನ ನಗುವಿನ ಬೆಳಕು ಹರಿಸಿದೆ
ಅಪನಂಬಿಕೆಯ ಹೊಗೆ ಆರಲಿಲ್ಲ;

ರಾತ್ರಿ ಮತ್ತು ಹಗಲೆನ್ನದೆ ನನ್ನ ಎದೆಯಲ್ಲಿ ಬೆಳೆಯುತ್ತಿತ್ತು
ಒಂದು ದಿನ ತೋಟದ ಹಣ್ಣಾಯಿತು ಹೊಳೆಯುವ ಸೇಬಿನಂತೆ;
ನನ್ನ ಶತೃವೂ ಅದರಷ್ಟೇ ಹೊಳೆಯುತ್ತಿದ್ದ
ಹಾಗು ಅವನಿಗೆ ಗೊತ್ತಿತ್ತು ಅದು ನನ್ನದೆಂದು;

ಒಮ್ಮೆ ರಾತ್ರಿಯ ಕತ್ತಲ ಸೆರಗು ಜಾರುತ್ತಿದ್ದಂತೆ
ನನ್ನ ತೋಟದಲ್ಲಿ ಬೆಳೆದ ಹೊಳೆವ ಸೇಬು ಕಣ್ಮರೆಯಾಗಿತ್ತು;
ಮನಸ್ಸು ಹಗುರಗೊಂಡಿತ್ತು ಆ ಸಂತೋಷದ ದಿನ
ಅದರ ಹಿಂದೆಯೂ ನನ್ನ ಶತೃವಿನ ಹಸ್ತಕ್ಷೇಪವಿದೆ ಎಂದು ಅರಿವಾಗಿತ್ತು;

ಪ್ರೇರಣೆ: 'A Poison Tree' by William Blake

ಮೌನಿ


ನೋಡ ನೋಡಬೇಕೆಂದು ಕನವರಿಸಿದ್ದೆ;
ಮಾತನಾಡಬೇಕೆಂದು ಬಡಬಡಿಸಿದ್ದೆ;
ನೋಡಲೂ ಇಲ್ಲ;
ಮಾತನಾಡಲೂ ಇಲ್ಲ;
ಅದಕ್ಕೆ ಇಂದು ಮೌನಿಯಾಗಿದ್ದೇನೆ;
ಮೌನವಾಗಿ ಎಲ್ಲವನ್ನೂ ಎದುರಿಸುತ್ತಿದ್ದೇನೆ;
ಒಳಒಳಗೇ ಮಾನಸಿಕವಾಗಿ ಬಲವಾಗುತ್ತಿದ್ದೇನೆ;
ಏನೇ ಬಂದರೂ;
ಏನೇ ಆದರೂ;
ಹೇಡಿಯಾಗಿ ಶರಣಾಗದೆ
ಧೈರ್ಯವಾಗಿ ಹೋರಾಡಲು ಸಿದ್ಧನಿದ್ದೇನೆ;
ಸಿದ್ಧನಾಗಿದ್ದೇನೆ;

ನಾಳೆಗೆ ಸಿದ್ಧತೆ


ನಿದ್ದೆ ಬರುವುದೆಂದು ಮಲಗಿದ್ದೆ
ಬದುಕಿನ ಭರವಸೆಗಳ ಕನಸು ಕಾಣುತ್ತಾ....
ಹೃದಯದ ಬಡಿತದ ತಾಳ-ಮೇಳಗಳ ಆಟದಲ್ಲಿ
ಹೊಸ ರಾಗ-ತಾನಗಳ ಹುಡುಕಾಟದಲ್ಲಿ
ಕಣ್ಣು ಮುಚ್ಚಿ ಎಲ್ಲವನ್ನೂ ಆಹ್ವಾನಿಸಿದ್ದೆ
ನಾಳೆಯೆಂಬ ಅವಕಾಶಗಳ ಹೆದ್ದಾರಿಗೆ
ಹೆಜ್ಜೆಯಿಡಲು ಮಾನಸಿಕವಾಗಿ ಸಿದ್ಧನಾಗಿದ್ದೆ.......

ತಿರಸ್ಕಾರ


ಮನದಲ್ಲಿ ನೂರು ಯೋಚನೆಗಳಿವೆ
ಕೊನೆಯೆಂದೋ ಬೇಸತ್ತಿದ್ದೇನೆ
ಹೊಸತನ ಹುಡುಕುವ ತವಕ ಒಂದು ಕಡೆ
ಕಾಣದ ಬೇಸರಕ್ಕೆ ಮನ ಮುದುಡುತ್ತಿದೆ ಮತ್ತೊಂದು ಕಡೆ
ಹೆಣಗಬೇಕು, ಸೊರಗಬೇಕು ಮತ್ತೆ ಮತ್ತೆ ಅಲ್ಲೇ ಕೊಳೆತು ನಾರುತ್ತಾ...
ಹೊಸಬರು ನಮ್ಮ ಸ್ಥಾನವನ್ನು ತುಂಬುವುದನ್ನು ನೋಡಿ
ಮನದಲ್ಲೇ ಕೊರಗುತ್ತಿದ್ದೇವೆ;
ನಮಗಿಲ್ಲದ ಅವಕಾಶ ಹೊರಗಡೆಯಿಂದ ಬಂದವನಿಗೆ ಸಿಗುತ್ತಿರುವುದಕ್ಕೆ
ಹೊಟ್ಟೆಯಲ್ಲಿ ಕಿರುಕುಳ ಶುರುವಾಗಿದೆ;
ನಮ್ಮ ಅವಕಾಶಗಳನ್ನು ಅವರು ಕಿತ್ತುಕೊಳ್ಳುತ್ತಿದ್ದಾರೆ ಎನ್ನಲೋ!
ಇಲ್ಲ ನಮ್ಮವರೇ ನಮಗೆ ಅವಕಾಶ ನಿರಾಕರಿಸುತ್ತಿದ್ದಾರೆ ಎನ್ನಲೋ!
ಇಲ್ಲ ನಿಮಗ್ಯಾರಿಗೂ ಯೋಗ್ಯತೆಯಿಲ್ಲವೆನ್ನುವ ಸಂದೇಶವೋ?
ಒಂದೂ ತಿಳಿಯದಾಗಿದೆ;
ಮೌನವೇ ಮಾತಾಗಿದೆ;
ಮನದಲ್ಲೇ ಅಸಹನೆಯ ಜ್ವಾಲಾಮುಖಿ ಒಳಗೊಳಗೇ ಕುದಿಯುತ್ತಿದೆ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...