Someಕ್ರಾಂತಿ


ಜೀವನ ನಿಂತ ನೀರಾಗಿದೆ ಎನಿಸುವಷ್ಟರಲ್ಲೇ
ಮತ್ತೆ ಬಂದಿದೆ ಸಂಕ್ರಾಂತಿ
ಜೀವನದಲ್ಲಿ ಸಣ್ಣ ಕಾಂತಿ ತಂದಿದೆ
ಎಲ್ಲರಲ್ಲೂ ತವಕವಿದೆ,ಹುಡುಕಾಟವಿದೆ
ನಗರದ ಬೆಂಬಿಡದ ಯಾಂತ್ರಿಕತೆಗೆ ಬೇಸತ್ತು
ಒಂದು ದಿನ ರೆಸಾರ್ಟ್ ನಲ್ಲಿ ವಿಶ್ರಾಂತಿ ಅರಸುವ ನಾವು
ಹಳ್ಳಿಯ ಜೀವನದ ಸರಳತೆಗೆ ಮನಸೋಲದವರು
ಹಳ್ಳಿಯ ಸಮಸ್ಯೆಗಳನ್ನೇ ದೊಡ್ಡದು ಮಾಡಿ ಮೂಗುಮುರಿಯುವೆವು
ಹಳ್ಳಿಹಬ್ಬದ ನೆಪದಲ್ಲಿ ರಜೆಯ ಮಜೆಯನ್ನು ಅನುಭವಿಸುವವರು
ಎಳ್ಳು-ಬೆಲ್ಲ ತಿಂದು ಮನವ ಬದಲಾಯಿಸಿಕೊಳ್ಳುವ ಅವಶ್ಯಕತೆ
ಈ ಹಬ್ಬ ಸಾರುತಿದೆ,ಕಾಲ ಬದಲಾಗಲಿ ಮನಸ್ಸು ನಿರ್ಮಲವಾಗಿರಲಿ.
ಸರಳತೆಯ ಕ್ರಾಂತಿ ಎಲ್ಲರ ಮನದಲ್ಲೂ ಉದಯವಾಗಲಿ.

ಭ್ರಷ್ಟತೆ


ಇಲ್ಲಿ ಯಾರು ಭ್ರಷ್ಟರಲ್ಲ ಹೇಳಿ?
ನಾನು,ಅವನು,ಅವರು
ಆ ಧರ್ಮದವರು,ಈ ಧರ್ಮದವರು
ರಾಜಕಾರಣಿಗಳು,ಅಧಿಕಾರಿಗಳು
ಸಮಾಜಸೇವಕರು,ಸಾಹಿತಿಗಳು
ಬುದ್ಧಿಜೀವಿಗಳು,ನ್ಯಾಯಾಧೀಶರು
ಶಿಕ್ಷಕರು,ಪೋಲೀಸ್........
ಪಟ್ಟಿ ತುಂಬಾ ಉದ್ದವಿದೆ;
ವ್ಯವಸ್ಥೆಗೆ ವ್ಯವಸ್ಥೆಯೇ ಭ್ರಷ್ಟ;
ಸಮಾಜಕ್ಕೆ ಸಮಾಜವೇ ಭ್ರಷ್ಟ;
ಭ್ರಷ್ಟತೆಗೆ ಎಲ್ಲರೂ ಪಾಲುದಾರರೇ
ನಮ್ಮನ್ನು ನಾವು ಪರಾಮರ್ಶಿಸಿಕೊಳ್ಳಬೇಕು
ಸ್ವಹಿತಾಸಕ್ತಿ,ಸ್ವಾರ್ಥ,ಸಾರ್ಥ,ಓಲೈಕೆ
ಎಲ್ಲವೂ ಭ್ರಷ್ಟತೆಗೆ ಕಾರಣಗಳೇ!
ಭ್ರಷ್ಟತೆಗೆ ಮಾನದಂಡದ ಮಾಪನವೇ?
ಎಲ್ಲರೂ ಭ್ರಷ್ಟರೇ ಆಗಿರುವಾಗ
ಆ ಕೋಮು,ಈ ಜಾತಿಯ ಜನರು ಭ್ರಷ್ಟರೆನ್ನುವುದು ಹಾಸ್ಯಾಸ್ಪದ;
’ವ್ಯಾಪಾರಂ ದ್ರೋಹ ಚಿಂತನಂ’ ಎಂಬುದೇ ಭ್ರಷ್ಟತೆಯ ಮೂಲ.

ಗುರಿ-ಸಾಧನೆ


ಎತ್ತ ಸಾಗಿದೆ ನಮ್ಮ ಪಯಣ?
ಗುರಿ ಇದ್ದೇ ಸಾಗುವ ಪಯಣ ಕಠಿಣ
ಗುರಿ ಇರದ ಪಯಣ ಪ್ರಾಣಿಗಳ ಜೀವನ
ಗುರಿ,ಸಾಧನೆ ಎಲ್ಲರಿಗೂ ಸಾಧ್ಯ ಮನಸ್ಸಿದ್ದರೆ!

ಯಕ್ಷಪ್ರಶ್ನೆ


’ಪ್ರೀತಿ’ ಹಾಗೆಂದರೇನು?
’ವಾತ್ಸಲ್ಯ’ ಹಾಗೆಂದರೇನು?
’ಮಮತೆ’ ಎಂದರೇನು?
’ಕರುಣೆ’ ಎಂದರೇನು?
ಶಬ್ದ ಕೋಶದಲ್ಲಿ ಮಾತ್ರ ಸಿಗುವ ಉತ್ತರಗಳು
ನಿಜ ಜೀವನದಲ್ಲಿ ಮಾತ್ರ ಯಕ್ಷ ಪ್ರಶ್ನೆಗಳೇ ಸರಿ!

ಕರುಣಾಸಾಗರ


ಹಾಡು ಹೇಳಬೇಕ್ಕೆನ್ನುವ ಆಸೆ
ಆದರೆ ಹಾಡಲಾರೆ:
ವರ್ಣಮಯ ಚಿತ್ರಗಳ ಬರೆಯುವ ಆಸೆ
ಆದರೆ ಬರೆಯಲಾರೆ;
ಉತ್ತಮ ಕವನಗಳ ಬರೆಯುವ ಆಸೆ
ಆದರೆ ಕವನ ರಚಿಸಲಾರೆ;
ಸುಂದರ ಶಿಲಾಕೃತಿಗಳ ಕೆತ್ತುವಾಸೆ
ಆದರೆ ಕೆತ್ತಲಾರೆ;
ಉತ್ತಮವಾಗಿ ಅಭಿನಯಿಸುವಾಸೆ
ಆದರೆ ಅಭಿನಯಿಸಲಾರೆ;
ಎಲ್ಲರ ಹೃದಯ ಗೆಲ್ಲುವಾಸೆ
ಆದರೆ ಗೆಲ್ಲಲಾರೆ;
ಜೀವನದಲ್ಲಿ ಏನೇನೋ ಆಗುವಾಸೆ
ಆದರೆ ಎಲ್ಲವೂ ನಾನಾಗಲಾರೆ;
ದೇವ ನಾನೇನಾಗಬೇಕೆಂಬುದು ನಿನ್ನಾಸೆ
ನೀ ಹೇಳಲಾರೆಯಾ?
ಅಥವಾ ಅರಿವು ಮೂಡಿಸಲಾರೆಯಾ?
ನಿನ್ನ ಹಾಡು ಹೊಗಳಲೂ ನನ್ನಿಂದಾಗದು
ಎಲ್ಲಕ್ಕೂ ನಿನ್ನ ಕರುಣೆಯ ಅಗತ್ಯವಿದೆ ದೇವ!;
ನಿನ್ನ ಕರುಣೆಯಿಲ್ಲದೆ
ಇಲ್ಲಿ ಏನೂ ಚಲಿಸದು ದೇವ
ಕರುಣಾಸಾಗರನೆಂದು ಕರೆವರು ನಿನ್ನ
ಒಂದು ಬಿಂದು ಕರುಣಾರಸವ ನೀ ನೀಡೆಯಾ ದೇವ.

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...