.|| ದರ್ಪ||

ನಾವು ಗಂಡಿನವರು
ನೀವು ಹೆಣ್ಣಿನವರು
ಇರಲಿ ನಡುವೆ ಅಂತರ\\

ನಾವು ಗಂಡಿನವರು
ನಮ್ಮನ್ನು ಯಾರೂ ಖುಷಿಪಡಿಸಲಾರರು
ನೀವು ಹೆಣ್ಣಿನವರು
ಕಾದಿದೆ ಸದಾ ಪರೀಕ್ಷೆಗಳು ಸಾವಿರಾರು\\

ನಮ್ಮನು ಸದಾ ಸಂತೋಷಪಡಿಸುವುದೇ ನಿಮ್ಮ ಗುರಿ
ಇರಬೇಕು ನೀವು ನಮಗಾಗಿ ಸದಾ ಹರಿಬರಿ
ನಾವು ಹೇಳುವೆವು ನೀವು ಸರಿಇಲ್ಲಾ
ಒಪ್ಪಬೇಕು ನಮ್ಮ ಮಾತು ಎಲ್ಲಾ\\

ಎಲ್ಲಾ ಆಗಬೇಕು ನಮ್ಮ ಅಣತಿಯಂತೆ
ಕಾಯಬೇಕು ನೀವು ಶಬರಿಯಂತೆ
ಏನು? ಏಕೆ? ಎತ್ತ? ಎಂಬ ಗುಟುರು ನಮ್ಮದು
ಊಂ,ಉಹುಂ, ಮೌನ ಕಣ್ಣೀರಿನ ಕರ್ಮ ನಿಮ್ಮದು\\

||ಸಾಧನ ಭೈರವ||

ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ಸತ್ತಂತಿರುವ ಮನವ ಬಡಿದೆಚ್ಚರುಸು
ನಿದ್ದೆಯಿಂದ ಮೈಮರೆಯುವವರ ಭ್ರಾಂತಿಯ ಇಳಿಸು
ಮೈಗಳ್ಳರ ಸೊಗಲಾಡಿತನವನು ಸಂಹರಿಸು
ಕಷ್ಟದಿ ಸೆಣಸುವವರನು ಪ್ರೋತ್ಸಾಹಿಸು


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ


ನೀ ನಡೆಯುವ ಸಾಧನೆಯ ಪಥದಲ್ಲಿ
ಜ್ಜಾನೋದಯವಾಗಲಿ ಮತಿಮತಿಯಲ್ಲಿ
ಸಾಧಕರ ವೇದಾಂತಿ ತಾರ್ಕಿಕರ ಆದರ್ಶದಲ್ಲಿ
ಜ್ಜಾನಜ್ಯೋತಿಯು ಬೆಳಗಲಿ ಭುವಿಯಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

ಒಂದೇ ಗುರಿ ಕೊನೆಯಲ್ಲ
ಮುಂದಿಹುದು ಭವಿಷ್ಯದ ಗುರಿಯಿಲ್ಲಿ
ಸಾಧನೆ ಎಂದೂ ನಿಂತನೀರಲ್ಲ
ಸಾಧಕನ ಚೈತನ್ಯದ ಕಲ್ಪವಲ್ಲಿ


ಓ! ಎಚ್ಚರಗೊಳ್ಳೋ ಸಾಧನ ಭೈರವ
ಧೈರ್ಯದಿ ಗುರಿಯನು ಸಾಧಿಸುವ

|| ಮನಸ್ಸಿನ ಕನ್ನಡಿ ||

ಓ ಗೆಳೆಯನೇ ಒಮ್ಮೆ ಮನದ ಕನ್ನಡಿಯೊಳಗೀಕ್ಷಿಸು
ಮೊಗವ ಕಂಡು ಹೇಳ್ ಇದುವೆ ಸಮಯ ಭಾವವಿಡು ತನುಜನೊಳ್
ಭಾವ ತನುಜನೊಳ್ ಇಡೆನೆಂದಾದರೆ ನೀನ್
ಬಗೆಯುತಿಹೆ ದ್ರೋಹವ ಈ ಜಗಕ್ಕೆ ಮತ್ತು ಹೆಣ್ಣೊಬ್ಬಳ ಮಾತೃತ್ವಕ್ಕೆ ಅಪಚಾರ
ಯಾವ ಸುಂದರ ಹೆಣ್ಣಿಹಳು ಈ ಜಗದಲಿ
ಮಡಿಲು ತುಂಬದ ಅಸ್ಪೃಶ್ಯೆ
ಬಯಕೆ ತುಂಬಿ ಸುರತಿಯಿಂದಲಿ ಗರ್ಭವತಿಯಾಗದವಳು?
ಯಾರಿಹನು ಮೂರ್ಖನು ತನ್ನ ಗೋರಿಯ ಕಟ್ಟುವವನು?
ಸ್ವಾರ್ಥದಿಂದಲಿ ತಾನೇ ಮಣ್ಣು ಮುಕ್ಕುವವನು?
ನಿನ್ನ ತಾಯ ಪ್ರತಿಬಿಂಬವೇ ನೀನ್
ತಾಯಿ ಕಾಣುತಿಹಳು ನಿನ್ನ ತಾರುಣ್ಯದಲ್ಲಿ ಕಳೆದ ಮುಂಜಾವು
ನಿನ್ನ ಮುಸುಕಿದ ಕಂಗಳಲ್ಲೇ ನೀನ್ ನೋಡುವೆ
ಸುಕ್ಕುಗಟ್ಟಿದ ಮನಸ್ಸಿನಲ್ಲಿ ನಿನ್ನ ಹರೆಯದ ನಿನ್ನ ನೀನೆ
ನೀನು ಮರೆತರೆ ನಿನ್ನ ತನುಜರಲ್ಲಿ
ಏಕಾಂತದ ಸಾವು, ನಿನ್ನ ರೂಪ ನಿನ್ನಲ್ಲೇ ಕೊನೆಯುಸಿರೆಳೆಯುವುದು.

||ದೇವ-ದಾಸಿ||

ದೇವನು ನಾನಲ್ಲ
ದಾಸಿಯು ನೀನಲ್ಲ
ನಾನು ಮೇಲಲ್ಲ
ನೀನು ಕೀಳಲ್ಲ
ಬೇಧ-ಭಾವ ನಮ್ಮಲಿಲ್ಲ

ಹಗಲು-ರಾತ್ರಿ
ಆಕಾಶ-ಭೂಮಿ
ಕಣ್ಣು-ರೆಪ್ಪೆ
ಹಾಲು-ಜೇನು
ಒಂದನೊಂದು ಅಗಲದು

ನಾನು-ನೀನು ಒಂದೇ......ಒಂದೇ
ಮರಣವೂ ಹಿಂದೆ......ಹಿಂದೆ
ಒಲವು ಮುಂದೆ.........ಮುಂದೆ
ನಾವದರ ಹಿಂದೆ......ಹಿಂದೆ
ಜೀವ-ಜೀವ ಪ್ರಣಯ ಪಕ್ಷಿ ನಾವು......ನಾವು

||ಶಾಂತಿ...ಇಸಂ||

ಬಹಳ ಹಿಂದೆ ಭಾರತದಲ್ಲಿ
ಬುದ್ದೀಸಂ...
ಜೈನಿಸಂ....
ಹಿಂದುಯಿಸಂ...
ಎಷ್ಟೊಂದು......ಇಸಂ ಗಳೆಲ್ಲಾ
ಪ್ರಪಂಚದಲ್ಲಿ ಹೆಸರುವಾಸಿಯಾಗಿತ್ತು.
ಆದರೆ ವಿಚಿತ್ರ ಈಗ ಪ್ರಪಂಚದೆಲ್ಲಡೆ
ಪ್ರಚಲಿತದಲ್ಲಿದೆ ಟೆರರಿಸಂ.... ನಕ್ಸಲಿಸಂ...
....................................................................................................................
.....................................................................................................................
.....................................................................................................................
ಆದರೆ ಇಂದು ಎಲ್ಲರಿಗೂ ಬೇಕಾಗಿದೆ ಶಾಂತಿಯಿಸಂ....

|| ಭಾವನೆ||

ಬರೆಯೋಣವೆಂದರೆ ಮನಸ್ಸು
ಓಡದೆ ತಟಸ್ಥವಾಗಿದೆ
ಮಾತನಾಡೋಣವೆಂದರೆ ನಾಲಗೆ
ತಿರುಗದೆ ಮೊಕನಾಗಿರುವೆ

ನಿನ್ನ ಕಂಡೊಡನೆಯೇ ಮನಸ್ಸು
ಆನಂದದಿಂದ ಕುಣಿಯುವುದು
ಬಾಯಿಯಿಂದ ಮಾತುಗಳು ಹೊರಡದೆ
ಹೃದಯದ ಮಾತುಗಳು ಕಣ್ಣೀರಾಗುವುದು

ನಿನ್ನ ನೆನಪೇ ಹೀಗೆ ಸಂತೋಷದ
ಸ್ಪೂರ್ತಿಯ ಗಳಿಗೆಗಳು ನನಗೆ
ಮನಸ್ಸಿನ ನೋವುಗಳು ಮಾಯವಾಗಿ
ಜೀವನದಲಿ ಹೊಸ ಹುರುಪು ನೀಡುವುವು

ಪ್ರೀಯೇ! ನೀನು ಅನನ್ಯ
ನನ್ನ ಶಕ್ತಿಯೇ ನೀನು
ಪ್ರೀತಿ-ವಾತ್ಸಲ್ಯದ ಗಣಿ
ಮಮತೆಯ ತಾಯಿಯೇ ನೀನು

ನೀನೇ ಹೀಗೆ ಸುಂದರ ಕಾವ್ಯ
ಓದುಗರ ಮನಗೆಲ್ಲುವ
ಕೇಳುಗರ ಹೃದಯ ಸೊರೆಗೊಳ್ಳುವ
ನನ್ನ ಭಾವನೆಗಳ ಅಂತರಂಗವೇ ನೀನು

||ಸೃಷ್ಠಿ||


ಹಬ್ಬ ಹರಿದಿನಗಳು
ತಿನ್ನಲೋಸುಗವಲ್ಲ
ಹಿಂದಿನ ಆದರ್ಶವ ತಿಳಿದು
ಬಾಳ್ವೆ ನಡೆಸೋ ಮನುಜ

ಮನುಜ ಜನ್ಮವು ಪ್ರಾಣೆಗಳಂತೆ
ಬಂದು ಹೋಗುವುದಕ್ಕಲ್ಲ
ಇದ್ದು ಜಯಿಸುವುದಕ್ಕೆ
ವಿಜಯಿಯಾಗೋ ಮನುಜ

ಸೃಷ್ಟಿಯ ಸೌಂದರ್ಯ
ಕುರಿಯು ಮೇಯುವುದಕ್ಕಲ್ಲ
ಕೋಗಿಲೆಯಂತೆ ಹಾಡುವುದಕ್ಕೆ
ಸೊಬಗ ಸವಿಯೋ ಮನುಜ

ಸೃಷ್ಟಿಯ ರಹಸ್ಯಗಳಿಗೆ
ಅಂತ್ಯವಿಲ್ಲ ತಿಳಿಯಲು
ಹತ್ತು ಹಲವು ಜನುಮಗಳು
ಸಾಲವು ಗಹನವಿದು ಮನುಜ

ಸುನೀತ- ||ಅದ್ವೈತರು||

ಮೌನದಲ್ಲೂ ಬಗೆಗಳುಂಟು, ನಿನ್ನ ಮೌನಕ್ಕೆ ಕಾರಣವೇನು?
ಕೋಪದ ಮೌನವುಂಟು,ಕೋಪವನ್ನು ತಡೆಯುವಿಕೆಯೋ ಹೇಗೇ?
ಮನಸ್ಸಿನಲ್ಲಿ ನಡೆಯುವ ಕದನ, ಮುಖದಲ್ಲಿ ಅದರ ಪ್ರತಿಬಿಂಬ
ಕಂಗಳೇ ಹೇಳುತ್ತೆ ಮೌನವೇನೋ ನಿಜ, ಬಾಣಗಳಂತೆಸೆಯುವ ಕಿಡಿಗಳೇಕೆ?
ಸಂತಸದ ಮೌನವಂತೂ ಅಲ್ಲ, ಚಂದಿರನ ತಬ್ಬಿದ ಕಾರ್ಮೋಡವೇ!
ಮುಖದಲ್ಲೇನೋ ಹೊಳಹು ಇದೆ, ಬೆಳಕು ಮಾತ್ರ ಮಬ್ಬಾಗಿದೆ
ಕೋಪಕ್ಕೆ ಕಾರಣವಂತೂ ನಾನೇ ಏನೋ!? ವಿಷಯವೇನೂ ತಿಳಿದಿಲ್ಲ
ಬಟ್ಟೆ, ಹಣ,ಒಡವೆಯಂತೂ ಅಲ್ಲ, ಮಾತಿನ ವಿರಳವೇ? ಏಕಾಂತವೇ?
ಸಂಬಂಧಿಗಳ ಕಿರಿಕಿರಿಯಂತೂ ಇಲ್ಲ, ಇನ್ನೆಲ್ಲಿಯ ಜಗಳ ಕದನ!
ಬೆಳಗು ಕಳೆದು ಇರುಳು ಮುಸುಕುವ ಹಾಗೆ ನಿನ್ನ ಮೊಗದ ಸಿರಿಯೂ..
ಬೆಳಗಿನ ಸೂರ್ಯನೂ ನಾನೇ.. ಇರುಳಿನ ಚಂದ್ರನೂ ನಾನೇ.. ನೀನೇ ಭೂಮಿ
ಮೌನ ಇರುಳು ಕ್ಷಣಿಕವೇ ನಮಗೆ- ಅಮಾವಾಸ್ಯೆಯಂತೂ ದೂರದೂರ
ಸೂರ್ಯ ಚಂದ್ರರನ್ನು ಮುತ್ತಿಕ್ಕುವ ಕಾರ್ಮೋಡಗಳು ಸಹಜ ನಾನು ನೀನೂ ಸಹಜ
ಇಲ್ಲಿ ಭೂಮಿ ಯಾರೋ, ಸೂರ್ಯಚಂದ್ರರಾರೋ- ನಾವು ಸದಾ ಅದ್ವೈತರು.....

-ಸಾಕ್ಷಾತ್ಕಾರ-

ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ

ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ

ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ

ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ

||ಯುಗಾದಿ||


ಜನಮನದಲೀ ಯುಗಾದಿ
ಯುಗಾದಿ ಆದಿಯಾದರೂ ಅಂತ್ಯದ ಸುಳಿವಿಲ್ಲ
ಅಂತ್ಯವಿಲ್ಲದಾತನ ಅನಂತ ಕ್ರೀಡೆಯ ನೋಡೋ ಮನುಜ


ಜಗದೊಡೆಯನ ಚದುರಂಗದಾಟದ ಬೊಂಬೆಗಳು ನಾವು
ಗೆಲ್ಲುವವರು ಯಾರೋ?
ಸೋಲುವವರು ಯಾರೋ?
ಸೋಲರಿಯದವನ ಕೈಚಳಕವನು ಬಲ್ಲವನು ನಾನಲ್ಲ!
ಸೋಲೋ.......?
ಗೆಲುವೋ.....?
ಅನುಭವಿಸುವವನು ನಾನೇ.......
ಹೋಳೀ ಹಬ್ಬದ ಓಕುಳಿಯ ಚೆಲ್ಲಿದಂತೆ
ಗಿಡ ಮರಗಳಲಿ ಬಣ್ಣವನ್ನೇ ಚೆಲ್ಲಿದನು.
ಬಿಸಿಲ ದಗೆಯಲೀ ಆದಿ!
ಯಾವ ಯುಗವೋ ಏನೋ?
ಅರಿವೆಂಬ ಅರಿವೆ ಇಲ್ಲದವನು ನಾನು
ಅರಿತವನು ನೀನು
ತಿಳಿಯ ಹೇಳೋ ಅರಿತಜ್ಜ.......

ಧಗೆಯಲ್ಲಿ ಯುಗದ ಆದಿ!
ಎಷ್ಟು ಸಮಂಜಸವೋ ಏನೋ?
ಅರಿತಜ್ಜನ ಕಾರ್ಯವೈಖರಿಯ ಬಲ್ಲವನು ನಾನಲ್ಲ
ಹೀಗೆಳೆಯುವ ಮನಸ್ಸಿನವನು ಅಲ್ಲ
ಆಗಿ ಹೋಗುದುದಕ್ಕೆ ಚಿಂತಿಸಿ ಫಲವೇನು?
ಸೃಷ್ಟಿಯ ಸಮಷ್ಟಿಯ ವೈಚಿತ್ರ್ಯವೀ ಯುಗಾದಿ......

ಅಮರ ಪೇಮ

ಪ್ರಿಯಮನ ಅರಸುತಲಿ
ಪ್ರಿಯತಮೆಯು ಅಲೆಯುತಿಹಳು

ಬಾನಿನಂಗಳದಲ್ಲಿ ಚಂದ್ರ
ತಾರೆಯರು ಮಿನುಗುತಿಹರು
ಏಕಾಂಗಿಯಾಗಿ ಬೃಂದಾವನದಲಿ
ನರಹರಿಯ ಸಂಗ ಬಯಸಿ ಬಂದಳು ರಾಧೆ

ಹುಡುಕುತಲಿ ನಡೆಯ
ಅವಳ ಕಾಲಿನ ಸ್ಪರ್ಶಕ್ಕೆ
ಮನಸೋತ ತರಗೆಲೆಗಳು
ಮನ್ಮಥಾನಂದವಾದಂತೆ ಜಾಗೃತವಾದವು

ಬಳುಕುತಲಿ ನಡೆಯೆ
ಗಿಡ ಮರಗಳು ಅವಳ ಸೌಂದರ್ಯಕ್ಕೆ
ಮಾರುಹೋಗಿ ಅವಳತ್ತ ಬಾಗಿ
ಚುಂಬನಕ್ಕೆ ಕರೆಯುತಿರುವಂತೆ ತೋರಿತು

ಹೂವಿನ ಮರಗಳು ಅವಳ
ಮೇಲೆ ಪುಷ್ಪಗಳನ್ನೆರಚಿದವು
ತಂಗಾಳಿಯ ಬೀಸಿ ಬೀಸಿ
ಅವಳ ಗಮನ ಸೆಳೆಯಲೆತ್ನಿಸಿದವು

ಅದಾವುದರ ಅರಿವೂ ಇಲ್ಲದೆ
ನರಹರಿಯ ಹುಡುಕುತಿಹಳು ರಾಧೆ

ನಡೆ ನಡೆದು ದಣಿವಾಗಿ
ಯಮುನಾ ತೀರದಲಿ ನೀರನ್ನು
ಕುಡಿಯುತಿರೆ ಬಾನಿನಲ್ಲಿಯ ಚಂದ್ರ
ಧರೆಗಿಳೆದು ಬಂದು ರಾಧೆಯ ಚುಂಬಿಸುವಂತೆ ಭಾಸವಾಯಿತು

ದೂರದಲಿ ಕಾಣಿಸಿತು ನರಹರಿಯ
ಬರುವು ನಲಿದಿತು ಮನ
ತನು ಬಳಲಿದ್ದರೂ ಮನವು ನರಹರಿಯ
ಬಯಸುತ್ತಿತ್ತು ಬೃಂದಾವನದಲೀ

ನೆನೆದೊಡೆ ಬಂದ ನರಹರಿಯ
ಬಾಹುಬಂಧನದಲಿ ಸಿಲುಕಿದಳು ರಾಧೆ

ಇವರ ಮಿಲನದಿಂದ
ಪುಲಕಿತಗೊಂಡ ವರುಣನು
ಕಾರ್ಮೋಡಗಳಿಂದ ಚಂದ್ರಮುಖಿಯ
ಬಳಸಲೋಡಿ ಬಂದನು

ಮಿಲನದ ಸಂತುಷ್ಟತೆಯ ಅನುಭವಿಸಿ
ಗುಡುಗು ಮಿಂಚುಗಳನ್ನೊಳಗೊಂಡು
ಧಾರಾಳವಾಗಿ ಮಳೆ ಸುರಿಯಿತು

ಇದಾವುದರ ಪರಿವೆಯೂ ಇಲ್ಲದೆ
ಇಬ್ಬರೂ ಒಲವಿನ ಸಾಗರದಲಿ
ಮದ್ಮೋನ್ಮತ್ತರಾದರು

ಇವರೀರ್ವರ ಮಿಲನವ ಕಂಡು
ಬಾಗಿದ್ದ ಮರಗಿಡಗಳು
ತರುಲತೆಗಳು ದಿಕ್ಕನು ಬದಲಿಸಿದವು
ನಾಚಿಕೆಯಿಂದಲಿ

ಹೂ ಗಿಡಗಳು ಪ್ರೇಮಿಗಳ
ಮೇಲೆ ಪುಷ್ಪಗಳನ್ನು ಸುರಿಸಿ
ವಾಸ್ತವೀಕತೆಯಿಂದ
ಬಹುದೂರ ಕರೆದೊಯ್ದವು

ಆರ್ಯ-ಚಂದ್ರಮುಖಿ

ತಿಳಿನೀಲಿ ಆಕಾಶದಲ್ಲಿ
ಹಾಲು ಚೆಲ್ಲಿದ ಹೊಂಬೆಳಕಲ್ಲಿ
ತಾರೆಯರ ಒಡನಾಟದಲ್ಲಿ
ಚಂದ್ರಮುಖಿ ಪಯಣಿಸುತಿಹಳು

ಕರ್ತವ್ಯದ ಕರೆಗೆ ಓಗೊಟ್ಟು
ಸಪ್ತ ಹಯವೇರಿ
ಬಾನಿನಂಗಳಕ್ಕೆ ಲಗ್ಗೆ ಇಟ್ಟನು
ಆರ್ಯ ಕುಮಾರ

ವಜ್ರ ಕಿರೀಟಗಳಿಂದ ಭೂಷಿತನಾದ
ಆರ್ಯ ಕುಮಾರನ ಸೌಂದರ್ಯವ
ಕಂಡು ನಾಚಿ ನೀರಾದಳು ಚಂದ್ರಮುಖಿ

ಚಂದ್ರಮುಖಿಯಲಿ ಪೇಮಾಂಕುರಿಸೆ
ನಾಲಗೆಗೆ ಮಾತುಗಳು ಎಟುಕದೆ
ನಾಚಿಕೆಯಿಂದ ಕೆನ್ನೆ ಕೆಂಪೇರಿದವು

ತಿಳಿದಾ ಗಗನವು ತಾನೇ ಆರ್ಯ ಕುಮಾರನಿಗೆ
ಮನ ಸೋತಂತೆ ನಾಚಿ
ಬಾನೆಲ್ಲಾ ಕೆಂಪಾಗಿಸಿದನು

ರೆಕ್ಕೆ ಬಿಚ್ಚಿ ಹಾರು ಹಕ್ಕಿಯೇ!


ನಾನಿರುವುದೊಂದು ದೊಡ್ಡಮರ
ನಮ್ಮ ರೆಂಬೆಯಲಿ ನೂರಾರು
ಪೊಟರೆಗಳು ಹತ್ತು ಹಲವು
ಹಕ್ಕಿಗಳ ನೆಮ್ಮದಿಯ ತಾಣ

ಭಾಸ್ಕರನ ಮೊದಲ್ಕಿರಣ ಮೂಡಿ
ಹಕ್ಕಿಗಳೆಲ್ಲಾ ಗೂಡುಗಳ ತೊರೆದು
ಹೋರಡುವುದು ಲೋಕ ಯಾತ್ರೆಗೆ
ತೆರಳುವುದು ಹೊಟ್ಟೆಗೆ, ಬದುಕಿಗೆ

ನಾನು ಇಲ್ಲೇ ಪೊಟರೆಯಲಿ
ಸಂಗಾತಿಗಳು ಬರುವವರೆಗೆ
ಕಾಯಬೇಕು ಹಾರಲಾರದೆ
ತೊಳಲಾಡಬೇಕು ಬದುಕಲೋಸುಗ

ಯಾವುದೋ ಕೆಟ್ಟ ಘಟನೆಗಳ
ಕಹಿನೆನಪುಗಳು ರೆಕ್ಕೆಗಳ
ಬಲವನ್ನೇ ಕಳೆದು ಹೆಳವನನ್ನಾಗಿಸಿದೆ
ನೆನಪುಗಳು ಮತ್ತೇ ಮತ್ತೇ ಕೊಲ್ಲುತ್ತಿವೆ

ನನ್ನದೇ ರೆಂಬೆಯಲಿ
ಪುಟ್ಟದೊಂದು ಪೊಟರೆಯಲಿ
ಬೆಳೆಯುತಿಹುದು ಪುಟ್ಟ ಹಕ್ಕಿಯೊಂದು
ಪುಟ ಪುಟನೆ ಹಾರುವುದು ನವ ಉತ್ಸಾಹದಿ

ಅದನೊಡಿದೊಡೆ ಬಲು ಸಂತಸವೆನಗೆ
ಹಾರು ಹಾರು ಮೆಲ್ಲಗೆ ಎತ್ತರೆತ್ತರಕೆ
ಜಾಗ್ರತೆಯಿಂದಲಿ ಎಚ್ಚರಿಯಿಂದಲಿ
ಮನಃಪೂರ್ವಕವಾಗಿ ಹರಸುವೆನು

ಅ ಪುಟ್ಟಹಕ್ಕಿ ನನ್ನನೊಡಿದೊಡೆ
ನಗುವುದು, ಪಟಪಟನೆ ಮಾತಾಡುವುದು
ನಗುತ ನಲಿಯುತ ಹಾರುವುದು
ದಿನವಿಡಿಯ ಅನುಭವಗಳ ಬಣ್ಣಿಸುವುದು

ಪುಟ್ಟ ಹಕ್ಕಿಯೇ ಹಾರು
ಎತ್ತರೆತ್ತರಕೆ ರೆಕ್ಕೆ ಬಲಿತಿವೆ
ಎಚ್ಚರಿಕೆ ಪುಟ್ಟಾ ಬೇರೆ ಕೆಟ್ಟ
ಹಕ್ಕಿಗಳು ತೊಂದರೆ ಕೊಟ್ಟಾವು

ಜೋಡಿಹಕ್ಕಿ ದೊರಕಿತೆಂದು
ಸಾಕಿಸಲಹಿದ ತಂದೆ-ತಾಯಿಗಳ
ಪ್ರೀತಿ ಅಕ್ಕರೆಯ ಅಣ್ಣ-ತಮ್ಮಂದಿರ
ಮರೆತು ದೂರ ಹೋಗದಿರು

ಪುಟ್ಟಾ ನೀ ಎತ್ತರೆತ್ತರಕೆ ಹಾರುತಿರೆ
ನನ್ನ ರೆಕ್ಕೆಗಳಿಗೂ ಶಕ್ತಿ ತುಂಬುವುದು
ನಿನ್ನೆತ್ತರಕೆ ನನ್ನ ಸ್ವಾಭಿಮಾನವೂ ಬೆಳೆವುದು
ಕಹೀ ನೆನಪುಗಳ ಮರೆತು ನಾ ಹಾರುವೆ

ಇಂದು ನಾನೂ ಹಾರುತಿರುವೆ
ನೀನೇ ಸ್ಪೂರ್ತಿಯಾದೆ
ಕಹೀ ನೆನಪುಗಳೆಲ್ಲಾ ಮರೆತಿದೆ
ನಿನ್ನದೇ ಸವಿನೆನಪುಗಳು

-ಸ್ವಾತಂತ್ರದ ಹಾಡು-

ಮಂಜು ಸುರಿಯುತ್ತಿದೆ
ಎದುರಿಗೆ ದಿಟ್ಟತನದಲಿ ಎದೆಗುಂಧದೆ ನಿಂತೆದೆ ಪರ್ವತಶ್ರೇಣಿ
ಕಗ್ಗತ್ತಲು ಕಣ್ಣಮುಂದೆ ಕಾನನವ ಆವರಿಸಿದೆ
ಕಣ್ಣ ಮುಚ್ಚಿದರೂ ನಿದ್ರೆ ಆವರಿಸದು
ಕಾಡಿದೆ ಮನದ ತುಂಬಾ ಸ್ವಾತಂತ್ರದ ಹಾಡು

ನಮ್ಮ ದೇಶ, ನಮ್ಮ ಭಾಷೆ
‘ವಂದೇ ಮಾತರಂ’ ಎದೆ ಎದೆಗಳಲ್ಲಿ ಕಿಚ್ಚುಹಚ್ಚಿದೆ
ಎಷ್ಟು ದಿನ ಗುಲಾಮಗಿರಿಯ ಶೋಷಣೆ?
ನಮ್ಮ ದೇಶ, ನಮ್ಮ ಮಣ್ಣು ನಾವೇ ನಮ್ಮ ಆಳುವೆವು
ದಿಕ್ಕು ದಿಕ್ಕುಗಳಲ್ಲಿ ಮೊಳಗಿತು ಸ್ವಾತಂತ್ರದ ಹಾಡು

ಸಾಲು ಸಾಲು ಜನರು
ತಾಯ ಗುಲಾಮಗಿರಿಯ ಬೇಡಿ ಕಳಚಲು
ತನು ಮನ ಪ್ರಾಣ ಮುಡಿಪಾಗಿಟ್ಟರು ನವ ಯೋಧರು
ಜಾತಿ ಮತ ಪಂಥಗಳ ಭೇದ ಭಾವ ತೊಲಗಿಸುತಾ
ನಾವೆಲ್ಲಾ ಭಾರತೀಯರೆಂಬ ಧೀರತೆಯ ಗೀತೆ ಮೊಳಗಿತು

ನಮ್ಮ ತಪ್ಪು ನಮ್ಮ ಒಪ್ಪು
ನಮಗೆ ನಾವೇ ವಿಮರ್ಶಕರು
ತಿದ್ದಿ-ತೀಡಿ, ಅಳಿಸಿ-ಬೆಳಸಿ ಹೊಸ ದಾರಿಯ ಹುಡುಕುವೆವು
ಶಾಂತಿ ಮಂತ್ರ ನಮ್ಮ ಶಕ್ತಿ
ಭಾಂದವ್ಯ ನಮ್ಮ ಯುಕ್ತಿ- ಪ್ರೇಮ ಗೀತೆ ಪಸರಿಸಲಿ

ನೂರು ಜನರು ಬರಲಿ
ಶರಣು ಬಂದವರಿಗೆ ತಾಯ ಆಸರೆ ಕಲ್ಪಿಸುವೆವು
‘ಬಂದೂಕು-ಖಡ್ಗ’ ಶಾಂತಿ ಮಂತ್ರ ಪಠಿಸದು
‘ಮತಾಂತರ-ಜಿಹಾದ್’ ಮೋಕ್ಷ ದೊರಕದು
ರಕ್ತ ಹರಿಯಲಿ ಸ್ವಾಭಿಮಾನ ಗೀತೆ ಉಳಿಯಲಿ

-ಭಾರತಿ-


ನಮ್ಮ ನಾಡಿನಲ್ಲಿ ನಾವು ಪರಕೀಯರು
ಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರು

ನಮ್ಮ ನಾಡು
ನಮ್ಮ ಭಾಷೆ
ಸಾವಿರ ಸಾವಿರ ವರ್ಷಗಳ ಇತಿಹಾಸ
ನಮ್ಮ ಜನ
ನಮ್ಮ ಮನ
ಸಾವಿರ ಸಾವಿರ ಒಡಕಿನ ಪರಿಹಾಸ

ನಮ್ಮ ದೇಶ
ನಮ್ಮ ತಾಯಿ
ಕೋಟಿ ಕೋಟಿ ಮಕ್ಕಳಿದ್ದರೂ ಸೊರಗಿಹಳು
ನಮ್ಮ ಮತ
ನಮ್ಮ ಧರ್ಮ
ಸಾವಿರ ಸಾವಿರ ದಾರಿಗಳಾಗಿ ಹರಿದು ಹಂಚಿ ಹೋಗಿದೆ

ನಾವು ಒಂದು
ನಾವೆಲ್ಲಾ ಒಂದು
ಅಜ್ನಾನದಿಂದ ವೈಮನಸ್ಸುಗಳು ಬೃಹದಾಕಾರವಾಗಿದೆ
ನಮ್ಮ ಮತ
ನಮ್ಮ ಜಾತಿ
ಜ್ನಾತಿಯಿಲ್ಲದ ಸಂಕೀರ್ಣತೆಗಳು ಅನೂಚಿತವಾಗಿ ಮೆರೆದಿದೆ

ಬಾ ಬದುಕಿಗೆ...ಬಾ ಸಾರ್ಥಕತೆಗೆ..

ನೀನು ಬದಲಾಗಬೇಕು
ನೀನು ತುಂಬಾ ಬದಲಾಗಬೇಕು
ಮತ್ತೆ ಮತ್ತೆ ಹೇಳುತ್ತಿದ್ದಳವಳು
ನನ್ನಲ್ಲಿ ಏನು ಬದಲಾಗಬೇಕು?
ನನ್ನಲಿ ನೂರು ಪ್ರಶ್ನೆಗಳು
ಮೊಡಲು ಕಾರಣ ಅವಳೇ!

ನೀಟಾಗಿ ತಲೆಕೂದಲು ಕತ್ತರಿಸು
ಇಸ್ತ್ರಿ ಮಾಡಿದ ಬಟ್ಟೆಗಳನ್ನೇ ಧರಿಸು
ಒಂದೊಂದೇ ತಿದ್ದಿ ತೀಡಿ ಹುರುಪುಗೊಳಿಸಿದಳವಳು

ಎಲ್ಲರೊಂದಿಗೂ ಮಾತನಾಡು
ತುಟಿಯ ಮೇಲೆ ಸದಾ ನಗುವಿರಲಿ
ನಿನ್ನ ಯೋಚನೆಗಳನ್ನು ಬದಲಾಯಿಸೆಂದು ದಾರಿ ತೋರಿದಳವಳು

ದಾರಿ ತೋರುವ ದೀಪವಾಗಿ
ಜ್ನಾನವೀಯುವ ಗುರುವಾಗಿ
ಮುಕ್ತಿ ತೋರುವ ತಾಯಿಯಾಗಿಹಳವಳು

ಹೇಗೆ ತೀರಿಸಲಿ ನಿನ್ನ ಋಣವ
ನಿನ್ನ ಸೇವೆ ಮಾಡುವ ಶಕ್ತಿ
ಎನಗೆ ನೀಡು ತಾಯೇ

ನೀನಿಲ್ಲದೆ ಈ ಜೀವನ ಬರಡು
ನಿನ್ನಿಂದಲೇ ಈ ಬದುಕಿಗೆ ಸಾರ್ಥಕತೆ
ಬಾ ಬದುಕಿಗೆ...
ಬಾ ಸಾರ್ಥಕತೆಗೆ

-ಸಾಕ್ಷಾತ್ಕಾರ-

ಮದುವೆಯೆಂದರೆ ಸ್ವಾತಂತ್ರದ ಹರಣ
ನಮ್ಮತನವ ವಿಮರ್ಶೆಗೊಳಪಡಿಸಿ ತೋರುವ ಮರಣ

ತನ್ನ ಮನೆಯಲ್ಲೇ ಆಗುವನು ಪರಕೀಯ
ಸುಖ-ಸಂತೋಷದ ತೋರುವಿಕೆಯ ರಾಜಕೀಯ
ಮಾತಿಗೆ ಬೆಲೆಯಿಲ್ಲ ,ತನ್ನವರ ನಡುವೆಯೇ ಅಸ್ಪೃಶ್ಯ
ನೋಡುಗರಿಗೆ ಮನರಂಜನೆಯ ದೃಶ್ಯಕಾವ್ಯ

ಎಲ್ಲೇ ಹೋದರೂ, ತಡವಾಗಿ ಬಂದರೂ
ಮೈಮೇಲೆ ಬೀಳುವುದು ಪ್ರಶ್ನೆಗಳ ಬಾಣ
ಮನೆಯಲ್ಲಿ ತನ್ನ ಪಾಡಿಗೆ ತಾನು ಸುಮ್ಮನಿದ್ದರೂ
ಠೀಕೆ-ಟಿಪ್ಪಣಿ ಮೊನಚು ಮಾತಿನ ಭಾಷಣ

ಹೆಚ್ಚು ಮಾತನಾಡಿದರೂ ಕಷ್ಟ
ಮೌನಿಯಾದರಂತೂ ತೀರ ನಿಕೃಷ್ಟ
ಬೆಂಕಿಯಿಲ್ಲದೆ ಬೇಯುವುದೇ ಸಂಸಾರ
ಇದುವೇ ಸತ್ಯ ದರುಶನದ ಸಾಕ್ಷಾತ್ಕಾರ

-ಅತಂತ್ರ-

ಏನು ಕಾರಣವ ಹೇಳಲಿ?
ನಾಳೆ ನಾನು ಬರುವುದಿಲ್ಲವೆಂದು
ಏನು ಹೇಳಿದರೂ
ನೀನು ತಿಳಿಯುವೆ ನನ್ನಲಿ ಪ್ರೀತಿಯಿಲ್ಲವೆಂದು
ನೂರು ಮಾತು ಸಾಕಾಗೊಲ್ಲ
ನಿನ್ನ ಹೇಗೆ ತಣಿಸಲಿ?
ನಿನ್ನೆ ಬರುವೆನೆಂದು ಹೇಳಿ
ನಾಳೆ ಬಾರೆನೆಂದರೆ ಮಾತು ಸಾಯುವುದಿಲ್ಲವೇ?

ಸುಮ್ಮನೇ ಕುಳಿತು ಯೋಚಿಸುವ ಭಾವಶಿಲ್ಪ
ಮನದೊಳಗೆ ಕಾಣದ ಕಧನದ ಮೂರ್ತಶಿಲ್ಪ
ಮನವ ನೋಯಿಸಿ ಫಲವೇನು?
ಆರ್ತನಾದದಲಿ ಆಂತರ್ಯದ ಭಾವ ಪ್ರತಿಮೆ ತುಂಬಿಹುದೇ?

ಮನಸ್ಸಿನಾಳಕ್ಕೆ ಇಳಿದು ತಿಳಿಯಲಾರೆ
ಮಾತಿನಲಿ ಹೇಳಿದರೇ ಅರ್ಥವಾಗದ ಸ್ಥಿತಿ ನನ್ನದು
ಅರ್ಥಮಾಡಿಕೊಳ್ಳಬೇಕಿದೆ ನಿನಗಾಗಿಯೇ
ಕಾರಣವ ಬಿಟ್ಟೆ ನಿನಗಾಗಿಯೇ ಬರುವವನಿದ್ದೇನೆ

-ಹೆಣ್ಣು-


ಹೆಣ್ಣು-ಹೆಣ್ಣಲ್ಲಿ ಮತ್ಸರವೇಕೆ?
ಒಂದೂ ತಿಳಿಯೋದಿಲ್ಲ-ಪ್ರಶ್ನೆಗೆ ಉತ್ತರವಿಲ್ಲ

ತಾಯಿ-ಮಗಳು ಅವಿನಾಭಾವ ಸಂಬಂಧ
ಮತ್ಸರವೆಲ್ಲಿ ಬಂತು? ಮತ್ಸರ ಮೊಲೆ ಸೇರಿತೋ!

ಅತ್ತೆ-ಸೊಸೆ ಋಣಾನುಬಂಧ
ಮತ್ಸರವೂ ಬಂತು-ತಲೆಯ ಮೇಲೆ ಕುಳಿತಿತೋ!

ತಾಯಿ-ಮಗಳು ಕರುಳಿನ ಸಂಬಂಧ
ಪ್ರೀತಿಯೇ ಮೈವೆತ್ತಿದಂತೆ

ಅತ್ತೆ-ಸೊಸೆ ದೇವರು ಕಲ್ಪಿಸಿದ ಬಂದ
ದ್ವೇಷವೇ ಧರೆಗಿಳಿದಂತೆ

ತಾಯಿ-ಮಗಳು ನಿರಾತಂಕ ಪೋಷಣೆ
ಅತ್ತೆ-ಸೊಸೆ ನಿರಂತರ ಶೋಷಣೆ

-ಮಧುಮೋಹಿ-

ಮೋಡ ಕವಿಯುತ್ತಿದೆ ನಾಳೆ ಬರುವೆಯೆಂದು
ಮನಸು ಹಾರುತ್ತಿದೆ ಸುಖದ ಶಿಖರವ ಏರಲೆಂದು

ಮಂಧಬೆಳಕು ನೂರು ಜನರು ಅಲ್ಲಿ
ಕಾಯುತ್ತಾ ಕುಳಿತಿದೆ ಗ್ರಾಹಕರು ಬರುವರೆಂದು
ಖಾಲಿ ಬಾಟಲು, ಖಾಲಿ ಕುರ್ಚಿ ಅಲ್ಲಿ
ಕತ್ತಲೊಳಗೆ ಸುಖವೂ ಹೂತಿರುವುದೆಂದು

ದ್ರಾಕ್ಷಾರಸ ಗಂಟಲೊಳಗಿಳಿದರೆ ಸ್ವರ್ಗ ಆರೋಹಣ
ಕತ್ತಲೊಳಗೆ ಮೈಮರೆಯುತ್ತಾ ನಾಳೆ ಬರುವುದೆಂದು
ದೇಹದ ಆಯಸ್ಸು ಇಳೆಯ ಕಡೆಗೆ ಅವರೋಹಣ
ಬೆಳಗು ಕಾಣದೆ ಹೃದಯವನ್ನೇ ಇರಿಯುವುದೆಂತು

ಕತ್ತಲೊಳಗೆ ಬೆಳಕು ಹುಡುಕುವ ಪಯಣಿಗ
ಹೃದಯದೊಳಗೆ ಪ್ರೀತಿಯ ವಿಷವ ಅರೆಯುವವ
ಬೆಳಗಿನೊಳಗೆ ಕತ್ತಲೆ ಮಾರುವ ವ್ಯಾಪಾರಿ
ಸಾವಿಗಾಗಿ ಕಾಯುವ ಪ್ರೀತಿಗಾಗಿ ಸೆಣಸುವ ಸೈನಿಕ

ರಾತ್ರಿಯಿಡೀ ನಿದ್ದೆಕೆಟ್ಟು ಪ್ರೀತಿಯ ಕೋಟೆ ಕಾಯುವೆ
ದೇಹದಲ್ಲಿ ಶಕ್ತಿ ಕುಂದದೇಯಿರಲೆಂದೇ ಈ ಮಧು
ಹೃದಯ ಛಿದ್ರ ಛಿದ್ರವಾಗಿದೆ ಅವಳು ಬಿಟ್ಟ ಬಾಣದಿಂದ
ಹೆಜ್ಜೆ ಮುಂದೆಹಾಕದಂತೆ ಕಟ್ಟಿಹಾಕಿದೆ ಅವಳ ಪ್ರೀತಿಯ ಬಲೆ

ಬಲೆಯೊಳಗೆ ಸಿಕ್ಕ ಮೀನಿನಂತೆ ನಾನಾಗಿಹೆ
ಮಧುವಿನ ಹನಿಹನಿಯಲ್ಲೂ ಅವಳ ಕಹಿನೆನೆಪು
ಭಾಳಿನ ಪುಟಪುಟದಲ್ಲೂ ಅವಳ ಅಪೂರ್ಣ ಸಹಿ
ಅವಳ ನೆನೆಪೇ ಹೆಚ್ಚಾಗಿ ಆಗಿಹೆ ಮಧುಮೋಹಿ

ಸಾವಿನ ಒಂದೋಂದು ಮೆಟ್ಟುಲೇರುತ್ತಿದ್ದರೆ ಏನೋ ಹರ್ಷ
ಬದುಕಿ ಸಾಧಿಸಿದ್ದಾದರೂ ಏನು? ಪ್ರಶ್ನೆ ಮುಂದಿದೆ
ಕೇಕೆ ನಗುವ ಹಾಕಿ ಅವಳ ನಗುವನೇ ತಂದಿದೆ
ಸಮಯವನೇ ಕೊಂದೆ, ನನಗೆ ನಾನೇ ಸಮಾಧಿ ಕಟ್ಟಿದೆ

ಮೋಡ ಕವಿದಿದೆ ಹೃದಯ ಭಾರವಾಗಿದೆ
ಭೂಮಿಗೆ ಭಾರವಾಗಿ ಕಾಯುತಿಹೆನು ಇಳೆ

-ಕೋಗಿಲೆಯೇ ಹಾಡು ಬಾ-

ಯಾವ ಕೋಗಿಲೆಯ ಕರೆಯಲಿ
ಎನ್ನೆದೆಯ ಹಾಡು ಹಾಡಲೆಂದು
ನೋವಿನ ನೂರು ರಾಗಕ್ಕೆ
ಎದೆಯ ತಂತಿ ಮೀಟುವುದೆಂತು

ಅಳುವ ರಾಗಕೆ ತಾಳ ಹಾಕುವರಾರು?
ಶುದ್ಧ ಶೃತಿಯ ಹಿಡಿದು ಹಾಡುವರಾರು?
ಶೃತಿ ಹಿಡಿದ ಮಳೆಯ ರಾಗಕ್ಕೆ
ನೂರು ಮರಗಳು ಮಾಧುರ್ಯ್ಯ ತುಂಬಿವೆ

ನನ್ನೆದೆಯ ತುಂಬೆಲ್ಲಾ
ನೂರುಭಾವಗಳು ಹೊರಬರಲಾರದೆ ಚಡಪಡಿಸುತ್ತಿದೆ
ಯಾವ ನೋವಿಗೆ ಯಾವ ರಾಗವ ಕಟ್ಟಲಿ?
ಯಾವ ಕೋಗಿಲೆಗೆ ಯಾವ ಹಾಡು ಹಾಡಲೆಂದು ಹೇಳಲಿ?

ನನ್ನೆದೆಯ ಭಾವಗಳೆಲ್ಲಾ
ಬತ್ತಿಹೋಗುವ ಮುನ್ನ
ಕಾಣದ ಕೋಗಿಲೆಯೇ ಬಾ
ಎನ್ನೆದೆಯೊಳಗೆ ನುಗ್ಗಿ ರಾಗರತಿಯ ಹಾಡು ಬಾ

-ಕಾಣದ ಪರದೆ-

ಎಲ್ಲಿ ಹೋದಿರಿ ಕಾರಣಗಳೇ
ಮನದ ನೆಮ್ಮದಿಯ ಹೊತ್ತು ಎತ್ತ ಹೋದಿರಿ?
ಗಹಗಹಿಸಿ ನಗುವ ನಗುವು ಮಾತ್ರ ಕೇಳಿಸುತ್ತಿದೆ
ಮನವು ದಿಕ್ಕುಗೆಟ್ಟು ಓಡುವಂತೆ ಮಾಡಿದೆ


ಕಾಣದ ಕಾರಣಗಳೇ
ಮನದ ತಿಳಿಯ ಕದಡಿದಿರೇಕೆ?
ಅತ್ತ ಹೇಳಲಾಗದೆ
ಇತ್ತ ಸುಮ್ಮನಿರಲಾಗದೆ ಮನಸು-ಬುದ್ಧಿ ಕದನಕ್ಕಿಳಿದಿದೆ


ಅದು ಸರಿ, ಇದು ತಪ್ಪು
ವಾದ-ವಿವಾದಗಳ ಸುಳಿಯಲ್ಲಿ
ಅದು ಸತ್ಯ, ಇದು ಮಿಥ್ಯ
ತರ್ಕ-ವಿತರ್ಕಗಳ ಬಾಣಲೆಯಲ್ಲಿ


ಬಿದ್ದು ಹೊರಳಾಡುವುದು
ನೋವಿನಲಿ ಬೇಯುವುದು
ಕಾಣದ ಗುರಿಯತ್ತ ಹೊರಳುವುದು
ಕಾರಣಗಳು ಗರಿಗೆದರಿ ನಲಿಯುವುದು


ಪೂರ್ವಾಗ್ರಹದ ಕಪ್ಪು ಮೋಡ ಆವರಿಸಿದೆ
ಬುದ್ಧಿಗೆ ಮಂಕು ಕವಿದಿದೆ ಬೆಳಕು ಕಾಣದೆ
ನಾನು ಹೇಳುವುದೇ ಸತ್ಯ ಬೇರೆಯವರದೆಲ್ಲಾ ಮಿಥ್ಯ
ಕಾಣದ ಪರದೆಯೊಂದು ಪರಿಧಿಯ ದಾಟದಿರಲೆಂದು ಕಟ್ಟಿಹಾಕಿದೆ

-ವಿಧಿ-


ಸುಮ್ಮನೆ ಮರೆಯಲ್ಲಿ ನಿಂತು ನಗುತ್ತಿದೆ
ಮೇಲೆ ಮೇಲೇರೆಂದು ಮುಂದೆ ತಳ್ಳಿ ಕೈಬಿಟ್ಟಿದೆ
ಹಾರಿಬಿಟ್ಟು ಗಾಳಿಪಟದ ಸೂತ್ರವ ಹರಿದಿದೆ
ಏಳು-ಬೀಳುಗಳ ಕಂಡು ಗಹಗಹಿಸಿ ನಗುತ್ತಿದೆ
ತನ್ನ ಶಕ್ತಿಯ ಅಗಾಧತೆಯ ಪ್ರದರ್ಶಿಸುತ್ತಿದೆ
ತನಗೆ ಸರಿಸಾಟಿಯಾರಿಹರೆಂದು ಬಡಬಡಿಸುತ್ತಿದೆ

ನೋವು-ನಲಿವುಗಳು ಕೂಡಿರಲೆಂದು
ಸಿಹಿ-ಕಹಿ ಬಾಳಿಗಿರಲೆಂದು
ಸೂತ್ರವ ಹಿಡಿದು ಪಾಠವ ಕಲಿಸುವ ಗುರುವೇ ತಾನೆಂದು
ಮನವನ್ನು ನೋವಿನಲ್ಲಿ ಶೋಧಿಸುತ್ತಿದೆ
ಶಾಂತಿಯ ಬಸಿದು ಬಸಿದು ತೆಗೆಯುತ್ತಿದೆ
ಗಲಭೆ, ಕೊಲೆ ರಕ್ತವ ಹರಿಸುತ್ತಿದೆ
ಶಾಂತಿ ಶಾಂತಿ ಶಾಂತಿ ಎಲ್ಲೆಂದು ಹುಡುಕುವಂತೆ ಮಾಡಿದೆ

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ

ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ

ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು

ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

-ಕನಸು-


ನಾನೊಂದು ಕನಸ ಕಂಡೆ
ಮನಸೇ ಅದನು ಹೇಗೆ ಹೇಳಲಿ?

ನಾಡಿನ ನದಿಗಳೆಲ್ಲಾ ತುಂಬಿ ಹರಿಯುವುದ ಕಂಡೆ
ಗೋವುಗಳೆಲ್ಲಾ ಕರೆಯದೇ ಹಾಲು ಕೊಡುವುದ ಕಂಡೆ
ಚಾರಿತ್ರ್ಯದ ಹೊಳೆ ಹರಿದು ದ್ವೇಷದ ಅವನತಿಯ ಕಂಡೆ
ವ್ಯಕ್ತಿಯ ಅಹಂ ತಾನೇ ತಾನಾಗಿ ಸುಡುವುದ ಕಂಡೆ

ಪರನಾರೀ ಸಹೋದರರ ಕಂಡೆ
ಕಾಮ ಸಂಕಟಪಡುತ್ತಾ ನರಳುವುದ ಕಂಡೆ
ದ್ವೇಷ ಮತ್ಸರ ಮೋಹಗಳೆಲ್ಲಾ ಧೂಳಿಪಟವಾಗುವುದ ಕಂಡೆ
ನೋವು ತಾನೇ ಮಸಣದ ಹಾದಿ ಹಿಡಿಯುವುದ ಕಂಡೆ

ಜಾತಿ-ಮತ ಭೇದಗಳೆಲ್ಲಾ ಉಸಿರುಗಟ್ಟಿ ಸಾಯುವುದ ಕಂಡೆ
ಧರ್ಮಗಳೆಲ್ಲಾ ಮೂಲೆಗುಂಪಾಗುವುದ ಕಂಡೆ
ಗುಡಿ-ಮಸೀದಿ ಚರ್ಚುಗಳೆಲ್ಲಾ ಧರೆಗುರುಳುವುದ ಕಂಡೆ
ಮೃಗೀಯ ಮಖವಾಡ ಕಳಚಿ ಮಾನವೀಯತೆಯು
ಅನಾವರಣಗೊಳ್ಳುವುದ ಕಂಡೆ

-ಬೆಂಬಲ-


ಯಾರು ನನ್ನ ಬೆನ್ನ ಹಿಂದೆ ಬೆಂಬಲವಾಗಿ ನಿಂತರೋ?
ಕಾಣದ ಆ ಕೈಗಳು ಎಷ್ಟು ಸಾರಿ ಬೆನ್ನು ತಟ್ಟಿತೋ?
ಪ್ರತಿ ಸಾರಿ ಸೋತು ಕಣ್ಣೀರಿಟ್ಟಾಗ
ಜೀವನ ಬೇಡಬೇಡವೆಂದು ಬೇಸರಿಸಿದಾಗ
ನನ್ನ ಕಣ್ಣಾಗಿ,ಮನದ ಶಕ್ತಿಯಾಗಿ,ಗೆಲುವಾಗಿ ಕಾಣದಾಯಿತೋ!

ಹೃದಯ ಬೆಂದು ಬೇಯುತ್ತಿರುವಾಗ
ಕಣ್ಣಲ್ಲಿ ನೋವು ನೀರಾಗಿ ಹರಿವಾಗ
ಗೆಳೆಯರು ಕೈಲಾಗದವನೆಂದು ನಕ್ಕಾಗ
ಪರೀಕ್ಷೆಯಲ್ಲಿ ನಾಪಾಸಾದಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ಆಶಾವಾದವೆಲ್ಲಾ ನಿರಾಶೆಯಾಗಿ ಕರಗುವಾಗ
ಹೆಜ್ಜೆಹೆಜ್ಜೆಯಲ್ಲಿ ಸೋಲುಂಡಾಗ
ನನ್ನವರೆಂದುಕೊಂಡವರೆಲ್ಲಾ ಕಾಣೆಯಾದಾಗ
ಏಕಾಂಗಿಯಾಗಿ ಜೀವನದ ಕಹಿ ನುಂಗುವಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ನಾನು ನಾನಾಗದೆ ನನ್ನ ನಾ ಮರೆತಾಗ
ನನ್ನತನವ ಕಂಡುಕೊಂಡು ನರಳುವಾಗ
ನೆರೆಹೊರೆಯವರ ಠೀಕೆ ಮನವ ಕಲಕಿದಾಗ
ಸಿಟ್ಟು ದ್ವೇಷವಾಗಿ ಮನುಷ್ಯತ್ವವ ಮರೆತಾಗ
ನನ್ನ ಬೆನ್ನ ಬಿಂದೆ ನಿಂತವರಾರೋ?

ಇಂದು ನಾನು ನಾನಾಗಿಹೆ
ಠೀಕೆ-ಟಿಪ್ಪಣಿಗಳಿಗೆಲ್ಲಾ ಉತ್ತರವಾಗಿಹೆ
ಕಂಡು ನಕ್ಕ ಗೆಳೆಯರಿಗೆಲ್ಲಾ ಸವಾಲಾಗಿಹೆ
ಸೋತು-ಸೋತು ಗೆಲ್ಲುವಂತಾಗಿಹೆ
ಯಾರೂ ಸಾಗದ ಹಾದಿಯಲ್ಲಿ ನಡೆದಿಹೆ
ನನ್ನ ಬೆನ್ನಹಿಂದೆ ನಿಂತು ಬೆಂಬಲವಾಗಿಹರಾರೋ
ತಿಳಿಯುವ ಬಯಕೆ ಇಂದಾಗಿದೆ

-ದಿನದ ಪುಟ-


ನೀನು ಬರುವೆಯೆಂದು ನಾ ಕಾಯುತ್ತಿದ್ದೆ
ನಿನ್ನ ಕಂಡು ಧನ್ಯತೆಯ ಪಡೆಯೋಣವೆಂದು

ಬೆಳಗಿನ ಸೂರ್ಯ ಕಣ್ಣುಬಿಟ್ಟಾಗ
ಮುಗಿಲು ಮೋಡಗಳ ಕಲೆಹಾಕಿ ನಿನಗಾಗಿ ಕಾಯುತ್ತಿತ್ತು
ನೀನು ಬರಲಿಲ್ಲವೆಂದು ತಾಳ್ಮೆ ಕಳೆದುಕೊಂಡಾಗ
ದುಃಖದ ಕಟ್ಟೆಯೊಡೆದು ಕಣ್ಣೀರು ಮಳೆಯಾಗಿ ಇಳಿಯುತ್ತಿತ್ತು

ಅದರ ದನಿಯು ನಿನಗೆ ಕೇಳಲಿಲ್ಲ
ನೀನು ಬರಲಿಲ್ಲ, ನನಗೆ ತಾಳ್ಮೆ ಕೆಡಲಿಲ್ಲ
ಬಾನ ಸೂರ್ಯ ಪಶ್ಚಿಮದಲ್ಲಿ ದಿನಕ್ಕೆ ತೆರೆ ಎಳೆಯುತ್ತಿದ್ದ
ಸಂಜೆಗೆಂಪು ಮುಗಿಲು ಮಳೆಯ ಶೃತಿಹಿಡಿದು ನಿನ್ನ ಕರೆಯುತ್ತಿದ್ದ

ಯಾವ ಹೆಸರಿನಿಂದ ನಿನ್ನ ಕರೆಯಲಿ?
ಯಾವ ಉಡುಗೊರೆಯ ನೀಡಿ ಗೌರವಿಸಲಿ
ಇಂದೆಲ್ಲವೂ ಭ್ರಮೆಯಂತೆ ಮನಕ್ಕೆ ಅನಿಸುತಿತ್ತು
ನೀನು ಬರಲಿಲ್ಲ,ಜೀವನದ ಈ ದಿನದ ಪುಟ ನಿನ್ನಹೆಸರಿಲ್ಲಿ ಬರೆಯಲಾಗಿತ್ತು

ನೂರು ನೆನಪುಗಳು ಮನದ ತೆರೆಯಲ್ಲಿ ತೆರೆದಿದೆ
ನೂರು ಅನಾಧಿಗಾನಗಳ ಸವಿನೆನಪುಗಳ ಹರಿಸಿದೆ
ಮಮತೆಯಿಂದಲಿ ನೀ ಕಲಿಸಿದ ಒಲವಿನ ನುಡಿಯಿದೆ
ನಿನ್ನ ಋಣವ ತೀರಿಸಲೆಂತೆಂದು ಮನವು ಎಣಿಸಿದೆ

ಈ ದಿನದಲ್ಲಿ ಏನೋ ವಿಶೇಷತೆಯಿದೆ
ನಾ ನಿನಗಾಗಿ ಕಾತರಿಸಿ ಕಾಯುತ್ತಿದ್ದೆ
ಬೇಸರವಿಲ್ಲ ನೀನು ಬರಲಿಲ್ಲವೆಂದು
ನಿನ್ನ ಮಧುರಗೆಳೆತನದ ಮುತ್ತುಗಳನ್ನು ಈ ದಿನದ
ಪುಟಗಳಲ್ಲಿ ಬರೆದೆನೆಂದು

-ಹೃದಯ ಮಾಧವ-

ಮಾಧವ ಮುರಳೀಲೋಲ ಎಲ್ಲಿರುವೆಯೋ?
ನೀನು ಹೇಗಿರುವೆಯೋ?
ತಿಳಿಯುವ ತವಕವು ಮನದಲ್ಲಿ ಮೂಡಿದೆ ಇಂದು
ರಾಧಾಮಾಧವ ಎಲ್ಲಿ ಹುಡುಕಲಿ ನಿನ್ನ
ಎಲ್ಲಿ ಹುದುಗಿರುವೆ?
ನೀನಿಲ್ಲದೆ ಬದುಕಿರಲಾರೆನು ಎಂದೆಂದೂ

ಸುತ್ತ ತಿರುಗುವ ಉದ್ಬುದ್ದ ತಿರುಗುವ
ಗಾಳಿಯ ನಿಲ್ಲಿಸಿ ಕೇಳಿದೆ " ಕೃಷ್ಣನೆಲ್ಲಿ? ಕೃಷ್ಣನೆಲ್ಲಿ?" ಎಂದು
ತಂಗಾಳಿಯ ಬೀಸಿ ತಣಿಸಿ ಕಾಣದೆ ಮರೆಯಾಯಿತು

ಉಧ್ಯಾನವನದಲ್ಲಿ ಆಗ ತಾನೆ ಕಣ್ಣುಬಿಡುತ್ತಿರುವ
ಸುಮವನ್ನು ಕೇಳಿದೆ" ಕೃಷ್ಣನೆಲ್ಲಿ? ನೀ ಕಂಡೆಯಾ?" ಎಂದು
ನಗುಮೊಗದಿ ಅರಳಿ ಪರಿಮಳವ ಪಸರಿಸಿತು

ಮಾಮರದಲ್ಲಿ ಕುಳಿತ ಕೋಗಿಲೆಯನ್ನು ಕೇಳಿದೆ
" ಕೃಷ್ಣನೆಲ್ಲಿಹನು? ನೀ ಕಂಡೆಯಾ?" ಎಂದು
ಮಧುರ ಕಂಠದಿ ಸುಸ್ವರ ಗಾಯನ ಮಾಡಿತು

ಆಗಸದಲ್ಲಿ ಪಯಣಿಸುವ ಕರಿ-ಬಿಳಿ ಮೋಡಗಳ ಕೇಳಿದೆ
" ಹೇಳಿರಿ ಗೆಳೆಯರೇ ಮಾಧವನೆಲ್ಲಿಹನೆಂದು?"
ಆಗಸದಲ್ಲಿ ಕುಣಿಯುತ್ತಾ ತಂಪದ ಮಳೆಗೈದವು

ಕಾನನದಿ ತಿರುಗುವ ನವಿಲನ್ನು ಕೇಳಿದೆ
" ಗೆಳೆಯಾ ನೀನಾದರೂ ಹೇಳು ಮಾಧವನೆಲ್ಲಿಹನೆಂದು?"
ನೂರು ಕಣ್ಣುಗಳ ತೆರೆದು ತಕಥೈ ತಕಥೈ ನರ್ತನ ಮಾಡಿತು

ನೂರು ಹಾದಿಯ ಸವೆಸುತಾ ಸಾಗುವ ನದಿಯನ್ನು ಕೇಳಿದೆ
" ಹೇಳೇ ನೀರೇ ಮಾಧವನೆಲ್ಲಿಹನೆಂದು?"
ಮಧುರದಿ ತಂಪನ್ನೆರೆಯುತಾ ಸಾಗರದ ಕಡೆ ಓಡಿತು

ಅಂಡಲೆದು ಸುಸ್ತಾಗಿ ನನ್ನ ಮನವನೇ ಕೇಳಿದೆ
" ಎಲ್ಲಿಹನು ಆ ಮಾಧವನು?"
ನಿನ್ನೊಳಗೇ ಇಹನು ಅಂತರಂಗದ ಕಣ್ಣು ತೆರೆದು
ನೋಡೆಂದಿತು ಹೃದಯವು

-ಮನದ ಚಿಂತೆ-


ನೀನಿಲ್ಲದ ನಾನು ಹೇಗಿರಲಿ ಕೃಷ್ಣಾ
ನೀನಿಲ್ಲದ ಬಾಳು ಬಾಳೇ ಕೃಷ್ಣಾ

ಈ ಜೀವ ಕೊಟ್ಟವ ನೀನು
ಈ ಮನದ ಚೈತನ್ಯ ನೀನು
ನಿನ್ನ ಕಾಣದ ಈ ಮನ
ನಿನ್ನ ನೋಡದ ಈ ಕಣ್ಣು ಏತಕ್ಕೆ ಕೃಷ್ಣಾ

ಇಂದು ಕಾಣುವೆ ನಿನ್ನನ್ನೆಂದು
ಕನವರಿಸಿ ಕಾತರಿಸಿ ಕಾಯುತಿಹೆ
ಮನಸಿಗೆ ಕನಸಿಗೆ ದಿನಕ್ಕೊಂದು
ನೆಪವ ಹೇಳಿ ಸಾಕುಸಾಕಾಗಿ ನಿದ್ದೆಗೆಟ್ಟಿಹೆ

ವರುಷ ವರುಷಗಳು ಉರುಳಿಹೋಗಿದೆ
ತುಂಬಿ ತುಳುಕುವ ನದಿ ನಿನ್ನ ಹುಡುಕಿ ಎತ್ತಲೋ ಹರಿದಿದೆ
ಗಿರಿ,ತರುಲತೆ,ಗಿಡಮರಗಳೆಲ್ಲಾ ಬೆತ್ತಲಾಗಿವೆ
ನಿನ್ನ ಕಾಣದೆ ಏನು ಮಾಡಲಾಗದೆ ಚಿಂತೆಗೆ ಬಿದ್ದಿದೆ

-ಸಂಬಂಧ-

ಶರಣು ಎನ್ನಿ
ಶರಣು ಬನ್ನಿ
ದೇವನನ್ನು ಕಂಡಿರಾ

ಹಬ್ಬವು ಬಂತು
ಹರುಷವ ತಂತು
ಕಟ್ಟೋಣ ತಳಿರು-ತೋರಣಾ

ನನ್ನೊಳು ನೀನು
ನಿನ್ನೊಳು ನಾನು
ನಡೆಯುತಿದೆ ಪ್ರೇಮ-ಪ್ರಣಯಾ

ಅವನೇ ವಸಂತ
ಅದೇ ಕೋಗಿಲೆ
ಹಾಡುತಿದೆ ಸುಸ್ವರ-ಗಾಯನಾ

ನಾನು ನಾನೇ
ನೀನು ನೀನೇ
ಸಾಗಿಸುವೆವು ಹಸನಾದ ಬದುಕಾ

ನೋವು ಎನ್ನಿ
ನಲಿವು ಎನ್ನಿ
ಗಳಿಸಬೇಕು ಅನುಭವಾ

ಕತ್ತಲಿರಲಿ
ಬೆಳಕೇ ಇರಲಿ
ಸಾಗಬೇಕು ಜೀವನಾ

ಬದುಕಬೇಕು
ಬಾಳಬೇಕು
ತೀರಿಸಬೇಕು ಭುವಿಯ ಋಣವಾ

ನಾಳೆ ಏನೋ
ನಾಳಿದ್ದು ಎಂತೋ
ಇಂದೇ ಕಟ್ಟೋಣ ಗುರಿಯ ಕಡೆಗೆ ಕಂಕಣಾ

ಅವನು ಬಡವ
ಅವನು ಬಲ್ಲಿದ
ತೊಡೆದು ಹಾಕೋಣ ತಾರತಮ್ಯಾ

-ಸಮರ್ಪಣೆ-

ನೀವೇ ಸ್ಪೂರ್ತಿ ಈ ಕವಿತೆಗೆ
ನೀವೇ ಸ್ಪೂರ್ತಿ ಈ ಬಾಳಿಗೆ
ನಿಮ್ಮ ಮನದ ಛಲ
ನಮ್ಮ ಬಾಳಿಗದುವೆ ಬಲ


ನಿಮ್ಮ ಜೀವನದ ಕಷ್ಟ
ಅಂದುಕೊಂಡೆವು ನಿಮಗಾಯಿತು ನಷ್ಟ
ನೀವು ಮುನ್ನಡೆದಿರಿ ಯಾವುದನ್ನೂ ಲೆಕ್ಕಿಸದೆ
ನೋಡು ನೋಡುತ್ತಿದ್ದಂತೆ ಸಾಧನೆಯ ತುತ್ತತುದಿಯ
ಗೆಲುವಿನ ಉತ್ಸಾಹದಿ


ಜೀವನದ ಏಳನೇ ವಯಸ್ಸಿನಲ್ಲಿ
ಯಾವುದೋ ವ್ಯಾಧಿಗೆ ಕಳೆದುಕೊಂಡಿರಿ ಕಣ್ಣುಗಳ ಬೆಳಕು
ಎಲ್ಲರಿಂದಲೂ ಕೇಳಿಸಿಕೊಂಡಿರಿ ಅನುಕಂಪದ ಅಲೆ
ನಿಮ್ಮ ದಾರಿ ನೀವೇ ಕಂಡುಕೊಂಡಿರೆ ಭಲೇ ಅಬಲೆ


ಸಾಧನೆಯಿರುವುದು ಸಾಧಕನಿಗಲ್ಲದೆ ಸೋಮಾರಿಗಲ್ಲ
ಈ ಮಾತು ನಿಜವಾಗಿಸಿದಿರಿ ನಡೆದು ಸಾಧನೆಯ ದಾರಿಯಲ್ಲಿ
ಸಾಮಾನ್ಯರೂ ಸಾಧಿಸದ ಸಾಧನೆ ನಿಮ್ಮದೆಂದು ಹೆಮ್ಮೆ ನಮಗೆ
ಪ್ರತಿದಿನವೂ,ಪ್ರತಿಹೆಜ್ಜೆಯಲ್ಲೂ ಅಡ್ಡಿಗಳನೆದಿರಿಸುವ
ನಿಮ್ಮ ಗಂಡೆದೆ ನಮಗೆ ಮೆಚ್ಚುಗೆ


ಕಣ್ಣಿದೂ ನಾವೇನೂ ಸಾಧಿಸಲಿಲ್ಲ
ಸಾಧಿಸಲಾರದಕ್ಕೆ ಹಲವು ಕಾರಣಗಳಿವೆ ನಮಗೆ
ನೀವು ಎಲ್ಲರಿಗೂ ಅಪವಾದ
ಹಲವು ಕಾರಣಗಳಿವೆ ನಿಮ್ಮ ಸಾಧನೆಗೆ

ನಿಮ್ಮನ್ನು ಕಂಡದ್ದು,ನಿಮ್ಮ ಜೊತೆ ಮಾತನಾಡಿದ್ದು
ಅದೇ ನಮ್ಮ ಸಾಧನೆಯಾಗಿದೆ
ನಿಮ್ಮ ಮಾತು,ನಿಮ್ಮ ನಡೆಗೆ
ನಿಮ್ಮ ಸಾಧನೆಗೆ ನೂರು ನಮನ

( ಡಾ ಸಂಗೀತಾ ರವರಿಗೆ ಸಮರ್ಪಣೆ. ಡಾ ಸಂಗೀತಾರವರು ಭಾರತೀಯ ಇತಿಹಾಸದ
ಮೊದಲ ಡಾಕ್ಟರೇಟ್ ಪಡೆದ ವಿಕಲಚೇತನ ( ಅಂಧ ಮಹಿಳೆ) ಮಹಿಳೆಯಾಗಿದ್ದಾರೆ.
ಅವರು ಕನ್ನಡದವರು,ಬೆಂಗಳೂರಿನವರೆಂಬುದು ನಮಗೆ ಹೆಮ್ಮೆ).

-ಅರಿವಿನ ಹಣತೆ-

ಹಣತೆಯೊಂದು ಬೆಳಕ ಚೆಲ್ಲಿ
ಎಷ್ಟು ಕತ್ತಲ ನುಂಗುವುದೋ?
ಅದರ ಪರಿಧಿಯ ನಾ ಬಲ್ಲೆ
ಬೆಳಕ ಕಾಣದೆ ಎಷ್ಟು ಜೀವಗಳು ನರಳುತಿಹುದೋ?
ಮನದ ಪರಿಧಿಯ ನೀನೊಬ್ಬನೇ ಬಲ್ಲೆ
ರವಿಯ ಕಣ್ಣು ಭೂಮಿಯ ಕಡೆಗೆ
ಜೀವ ಕೋಟಿಗದುವೆ ಕಾರಣ ಏಳಿಗೆಗೆ
ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ಯೋಚನೆ ಬರಿಯ ಹೊಟ್ಟೆಯ ಬಗೆಗೆ
ಮನದ ದೀಪ ಹಚ್ಚಲೊಲ್ಲರು
ಬದುಕಿನ ಭೇಗುದಿಗೆ ನರಳುತಿಹರು
ಕೋಟಿಗೊಬ್ಬನೇ ಸಂಭವಿಸುವನು
ಜನರ ಮನದಲಿ ಅರಿವಿನ ಹಣತೆಯ ಹಚ್ಚುವನು
ಎಷ್ಟು ಯುಗಗಳು ಕಾಯಬೇಕೋ?
ಎಷ್ಟು ಜೀವಗಳು ನರಕಯಾತನೆ ಅನುಭವಿಸಬೇಕೋ?
ಮನದ ಅಂತಃಚಕ್ಷುವ ಎಚ್ಚರಗೊಳಿಸದ ಬೆಳಕು
ನೂರು ಇದ್ದರೇನು? ಇಲ್ಲದಿದ್ದರೇನು?

-ಶಿಲ್ಪಿಯ ಶ್ರಮ-


ಒಮ್ಮೆ ದೇವಾಯಲಕ್ಕೆ ಹೊರಟೆ
ಮನದಲ್ಲಿ ಅನೇಕ ಭಾವತೆಗಳಿಗೆ ಜಾಗಮಾಡಿಕೊಡುತ್ತಾ
ಈ ಮನದಲ್ಲಿ ಯೋಚಿಸುವುದಕ್ಕೆ ಶಕ್ತಿಕೊಟ್ಟವರಾರು?
ಈ ಭೂಮಿಗೆ ಬೆಳಕ ಚೆಲ್ಲುವರಾರು?
ಹೀಗೆ ಉತ್ತರ ಸಿಗದ ನೂರು ಪ್ರಶ್ನೆಗಳು ಮನದಲ್ಲಿ ಕಾದಟಕ್ಕಿಳಿಯಿತು
ಮನಸ್ಸಿನ ನೀರವತೆಯ ನಾಶಮಾಡಿ

ಗುಡಿಯ ಗೋಪುರ ದೂರಕ್ಕೆ ಕಾಣುವುದು
ಅದ್ಬುತ-ಕಲಾಚದುರನ ಕೈಚಳಕಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ
ಗುಡಿಯ ಘಂಟೆಯ ಶಬ್ದ ಕಿವಿಗೆ ಇಂಪಾಗಿ ಕೇಳಿಸುತಿತ್ತು
ಬೆಳಗಿನ ಸುಪ್ರಭಾತ ಮನದಲ್ಲಿ ಚೈತನ್ಯ ತುಂಬುತಿತ್ತು
ಮನದಲ್ಲಿ"ಕೃಷ್ಣಾ,ಕೃಷ್ಣಾ" ಜಪ ದೇಹದ
ಮೂಲೆಮೂಲೆಯಲ್ಲಿ ಮಾರ್ಧವಿಸುತಿತ್ತು

ದೇವನೊಬ್ಬ ನಾಮಹಲವು
ಹಲವು ಭಾಷೆ,ಧರ್ಮ,ತೋರುವ ಭಕ್ತಿ ಒಂದೇ
ಎಲ್ಲರೂ ಒಂದೇ,ಕಿತ್ತಾಟ ಹಲವು
ಎಲ್ಲರೂ ಮನುಷ್ಯರೇ,ಯೋಚನೆ ಮಾತ್ರ ಹಲವು
ಮೇಲು-ಕೀಳು,ಭೇದ-ಭಾವ ಕೀಳದೇ ಬೆಳೆದಿದೆ

ದೇವರ ಶಿಲೆ ಅತ್ಯದ್ಭುತ
ನೂರು ನಮನ ನಿನಗೆ ದೇವರೆಂದು
"ಮೂರ್ತಿ ಪೂಜೆ ಸಲ್ಲದು"
ಬುದ್ದಿಜೀವಿಗಳ ವ್ಯರ್ಥ ಆಲಾಪನೆ
ಬುದ್ದಿಯಿಲ್ಲದ?ಪ್ರಲಾಪನೆ
ನಾವು ನಮಿಸುವುದು ಆ ಕಲ್ಲು ದೇವರಿಗೇ ನಿಜ
ನಾವು ನಮಿಸುವುದು ಆ ಶಿಲೆಯ ಕೆತ್ತಿದ ಶಿಲ್ಪಿಯ ಕಲಾತ್ಮಕತೆಗೆ
ನಾವು ನಮಿಸುವುದು ಆ ಶಿಲ್ಪಿಯ ಭಾವನೆಗಳ ಎರಕಹೊಯ್ಯುವಿಕೆಗೆ
ನಾವು ನಮಿಸುವುದು ಆ ಶಿಲ್ಪಿಯ

ದೇವರನ್ನು ಧರೆಗೆ ಕರೆತರುವ ಅವನ ಭಗೀರಥ ಯತ್ನಕ್ಕೆ
ಅವನ ಅಸಾಧಾರಣ ತ್ಯಾಗಕ್ಕೆ
ಅವನ ಅಸಾಮಾನ್ಯ ಶ್ರಮಕ್ಕೆ
ಆ ಮೂರ್ತಿಗೆ ನಮಿಸುವುದು ತಪ್ಪಲ್ಲವಲ್ಲ,ತಪ್ಪಲ್ಲವಲ್ಲ

-ಕಾಟ-

ಮನಸ್ಸಿನ ನೆಮ್ಮದಿಗೆಂದು ಹೊರಟೆ
ಎಲ್ಲಿ ಹುಡುಕುವುದು ನಡೆಯುತ್ತಿತ್ತು ಮನದಲ್ಲಿ ಹರಟೆ
ಗುಡಿ,ಕಾನನ,ಹೆಣ್ಣು,ಹೊನ್ನು,ಮಣ್ಣು ನಡೆಯುತ್ತಿತ್ತು ಬೇಟೆ
ಧರ್ಮ,ಅಧರ್ಮ,ಕಾಯಕ,ಪ್ರೇಮ,ಕಾಮ ನಿಲ್ಲದ ಗಲಾಟೆ
ಎಲ್ಲೂ ಕಾಣಲಿಲ್ಲ
ಎಲ್ಲೂ ಹೊಳೆಯಲಿಲ್ಲ
ಅರಸಿ ಅರಸಿ ತಾಳ್ಮೆ ಕಳೆದುಕೊಂಡಿದ್ದಾಯಿತು
ನಿಲ್ಲಲಿಲ್ಲ ಹುಡುಕಾಟ

ನಿಲ್ಲಲಿಲ್ಲ ಅದರ ಹುಡುಕಾಟ
ಕಾಣದಾಯಿತು ಅವನ ಸೂತ್ರದಾಟ
ಹುಡುಕಾಟ ನಿರಂತರ
ನಿರಂತರ ಹುಡುಕಾಟ

-ಬದಲಾದ ಚಿತ್ರ-

ಕನ್ನಡಿಯ ಮುಂದೆ ನಿಂತು ನನ್ನನ್ನೇ ನೋಡಿಕೊಂಡೆ
‘ಮುಗ್ದ ಹುಡುಗ’ ಮನಸ್ಸು ಹೇಳಿತು
ಬುದ್ದಿ ನಗುತ್ತಿತ್ತು ‘ಮುಗ್ದ ಹುಡುಗ’
ಕಣ್ಣು ಮಿಟುಕಿಸಿದೆ ನನ್ನನ್ನೇ ನಾನು ಮರೆತು
ನಾನೊಬ್ಬ ದೊಡ್ಡ ಚಿತ್ರದ ಹೀರೋ ಎಂದು ನನಗೆ ನಾನೇ
ಭಾವಿಸಿಕೊಂಡೆ, ಕೈ ತಲೆಗೂದಲನ್ನು ತೀಡುತ್ತಿತ್ತು
ಮನಸ್ಸು ಹತ್ತು ವರ್ಷ ಮುಂದೆ ಹೋಗಿ ನಿಂತಿತ್ತು
ಚಿತ್ರ ಮಂದಿರದಲ್ಲಿ ನೂರು ದಿನ ಧಾಟಿ ಮುನ್ನುಗ್ಗುತ್ತಿದೆ
ನನ್ನ ನಾಯಕತ್ವದ ಚಿತ್ರ, ನಿರ್ಮಾಪಕರು ನನ್ನ ಮನೆಯ
ಮುಂದೆ ಸಾಲುಗಟ್ಟಿ ನಿಂತಿದ್ದಾರೆ ನನ್ನ ಕಾಲ್ ಶೀಟಿಗಾಗಿ
ಎಲ್ಲಿ ಹೋದರೂ ಹುಡುಗಿಯರ ಸಾಲು ಸಾಲು ನನ್ನ
ಹಸ್ತಾಕ್ಷರಕ್ಕಾಗಿ,ನನ್ನ ಚುಂಬಿಸಲು ಮುಗಿಬೀಳುತ್ತಿದ್ದಾರೆ
ಕೆಲವೇ ದಿನಗಳಲ್ಲಿ ಅಸಹ್ಯವಾಗತೊಡಗಿತು
ನನ್ನ ಸ್ವಾತಂತ್ರ ಹರಣವಾಗತೊಡಗಿತು
ಗೆಲುವಿನ ಗೀಳು ಅಂಟಿಕೊಂಡಿತು
ಸೋಲಿನ ರುಚಿಯೇ ಚಂದವೆನಿಸಿತು
ಅಜ್ನಾತವಾಸಕ್ಕೆ ಹೊರಡಬೇಕೆನಿಸಿತು
ಸಾಕು ಸಾಕೆನಿಸಿತು
ಮುಂದೆ ಬೇಡವೆನಿಸಿತು
ನಾನು ಏನಾಗಬೇಕಾಗಿತ್ತು?
ನಾನು ಏನಾದೆ?
ಉತ್ತರ ಸಿಗದ ಪ್ರಶ್ನೆಗಳು
ಸುಳಿಸುಳಿಯಾಗಿ ನನ್ನ ಬಳಸುತ್ತಿತ್ತು
ದಿಗಂತದ ಸೂರ್ಯ ಬರುವೆ ಎಂದು ತೆರಳುತ್ತಿದ್ದ
ಮನದಲ್ಲಿ ನೂರು ಪ್ರಶ್ನೆಗಳ ಹುಟ್ಟುಹಾಕಿ
ನಾಳೆ ಉತ್ತರ ಹೇಳು ಎಂದು ಹೋದ ಗುರುವಿನಂತೆ ಕಂಡ.
ಹಣೆಯ ಮೇಲಿ ನೂರು ಬೆವರಿನ ಹನಿಗಳು ಮೂಡಿತ್ತು
ವಾಸ್ತವಕ್ಕೆ ಇಳಿದ ಮೇಲೆ ಕಂಡ ಮನಸ್ಸಿನ ಕಣ್ಣೀರದು
ಭ್ರಮೆ-ವಾಸ್ತವ ಮನುಷ್ಯನನ್ನು ತಿಂದುಬಿಡುತ್ತೆ
ಭ್ರಮೆಯೇ ಬಧುಕು ಎಂದು ನಡೆಯುವವರೇ ಹೆಚ್ಚು
ವಾಸ್ತವವ ಅರಿತು ನಡೆಯುವವನೇ ನಿಜವಾದ ನಾಯಕ
ಕನ್ನಡಿಯು ನನ್ನ ಕಂಡು ನಗುತ್ತಿತ್ತು
ಮನದಲ್ಲಿ ಮೂಡಿದ ಚಿತ್ರ ಬದಲಾಗಿತ್ತು.

-ಅಹಂನ ಹುಚ್ಚು-

ಜನಸಾಗರ ಹರಿದುಬರುತ್ತಿದೆ
ಅದು ಜಾತ್ರೆಯೋ?
ಜನರ ಯಾತ್ರೆಯೋ?
ತಿಳಿಯದಾಗಿದೆ ಏಕೆ ಹೀಗೆ ಹರಿದುಬರುತ್ತಿದ್ಡಾರೆಹೌದು ಇಲ್ಲಿ ಎಲ್ಲಕ್ಕೂ ಜಾತ್ರೆಯೇ
ತಿನ್ನುವುದಕ್ಕೆ
ಕೊಳ್ಳುವುದಕ್ಕೆ
ಬಸ್ಸಿಗೆ ಹತ್ತುವುದಕ್ಕೆ
ಮಾಯೆಯೋ ತಿಳಿಯದಾಗಿದೆ ಹೀಗೇಕೆ?

ಸುದ್ದಿ ತಿಳಿಯುತ್ತಿದ್ದಂತೆ
ಬೀದಿಗಿಳಿಯುತ್ತಾರೆ
ತವಕವೋ?
ಆಶಾವಾದವೋ?
ಅವಕಾಶಾವಾದವೋ?
ತಿಳಿಯದಾಗಿದೆ ಜನರಲ್ಲಿ ಹರಿವ ಚಿಂತನೆ?

ಸಿಕ್ಕಿದ್ದನ್ನು ಬಾಚುತ್ತಾರೆ
ಕೈಗೆ ಸಿಕ್ಕಿದ್ದನ್ನು ಬಿಸುಟುತ್ತಾರೆ
ಬಾಯಿಬಾಯಿ ಬಡಿದುಕೊಳ್ಳುತ್ತಾರೆ
ಮೊಸಳೆ ಕಣ್ಣೀರು ಸುರಿಸುತ್ತಾರೆ
ತಿಳಿಯದಾಗಿದೆ ಮುಖವಾಡವಾವುದೆಂದು?

ಎಲ್ಲರೂ ಮಹಾನ್ ನಟರೇ
ಮುಖದಲ್ಲಿ ಮಂದಹಾಸ
ಮನಸ್ಸಿನಲ್ಲಿ ನಡೆದಿದೆ ಖೂಳದಾಟ
ಹೊಟ್ಟೆ ಹೊರೆಯುವುದಕ್ಕೆ ನಡೆದಿದೆ ಕಾದಾಟ
ತಿಳಿಯದಾಗಿದೆ ಯಾವ ಮಾಯೆ ಆವರಿಸಿದೆಯೆಂದು?

ನಾನು ನಾನೇ
ನನ್ನದೇ ಹೆಚ್ಚು
ಅಹಂನ ಹುಚ್ಚು
ಬೃಹದಾಕಾರವಾಗಿ ಆವರಿಸಿದೆ ಬೆಂಕಿಯ ಕಿಚ್ಚು
ಕಣ್ಣು ಕುರುಡಾಗಿದೆ, ಬುದ್ದಿ ಮಂದವಾಗಿದೆ ಏನೂ ಮಾಡಲಾಗದೆ

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...